ಇಂದು ಬಿಸನಾಳ ಬನ್ನೆಮ್ಮದೇವಿಗೆ ಸಂಭ್ರಮದ ಜಾತ್ರೆ
Today is a festive fair for Bisana's Bannemmadevi.
ಲೋಕದರ್ಶನ ವರದಿ
ಮಹಾಲಿಂಗಪುರ 30: ಸಮೀಪದ ಬಿಸನಾಳ ಗ್ರಾಮದಲ್ಲಿ ಆರಾಧ್ಯ ಧೈವ ಬನ್ನೆಮ್ಮದೇವಿ ಜಾತ್ರಾ ಮಹೋತ್ಸವ ಹಾಗೂ ಮಾರುತೇಶ್ವರ ಓಕುಳಿ ಮೇ.1ರಂದು ವಿಜೃಂಭನೆಯಿಂದ ಜರುಗಲಿದೆ. ಜಾತ್ರೆ ನಿಮಿತ್ತ ಈಗಾಗಲೇ ಏ.28 ಮತ್ತು 29ರಂದು 1 ನಿಮಿಷದ ಹೋರಿಗಳ ಗಾಡಾಗಾಡಿ ಸ್ಪರ್ಧೆ, 1 ಹಾಲಲ್ಲಿನ ಹೋರಿಗಳ ಸ್ಪರ್ಧೆ ಜರುಗಿವೆ. ಏ.30 ರಂದು ಓಕುಳಿಯ ಕೊಂಡಪೂಜೆ ಜರುಗಿತು. ಮೇ.1ರಂದು ಶುಕ್ರವಾರ ಬೆಳಗ್ಗೆ ಬನ್ನೆಮ್ಮದೇವಿ ಉಡಿ ತುಂಬುವ ಕಾರ್ಯಕ್ರಮ, ಸಂಜೆ 4 ಗಂಟೆಗೆ ಓಕುಳಿ, ನಂತರ ಕುಸ್ತಿ ಸ್ಪರ್ಧೆ, 6 ಗಂಟೆಗೆ ಬನ್ನೆಮ್ಮದೇವಿ ರಥೋತ್ಸವ ಜರುಗುವುದು. ರಥೋತ್ಸವದ ಮುಂದೆ ಕರಡಿಮಜಲು, ಡೊಳ್ಳಿನ ಬಡಿತ ಸೇರಿದಂತೆ ನಾನಾ ವಾದ್ಯಮೇಳ ನಡೆಯಲಿದೆ. ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾದ ಊರಿನ ಮತ್ತು ಜಾತ್ರೆಯ ವಿಹಂಗಮ ನೋಟ ಎಲ್ಇಡಿ ಪರದೆಯಲ್ಲಿ ಪ್ರದರ್ಶನಗೊಳ್ಳಲಿದೆ. ರಾತ್ರಿ 10 ಗಂಟೆಗೆ ಧರ್ಮದ ನುಡಿ, ಕ್ರಾಂತಿಯ ಕಿಡಿ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಮೇ. 2ರಂದು ರಾಜ್ಯಮಟ್ಟದ ತೆರೆಬಂಡಿ ಸ್ಪರ್ಧೆ ನಡೆಯಲಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಶಿರೋಳ ತಿಳಿಸಿದ್ದಾರೆ.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 