ದೀಪ ಬೆಳಗಿಸಿ ಪ್ರಧಾನಿ ಕರೆಗೆ ಬೆಂಬಲಿಸಿದ ಜನತೆ
ಬಳ್ಳಾರಿ:- 9ನಿಮಿಷಗಳ ಕಾಲ 9ದೀಪ ಬೆಳಗಿಸಿ ಕರೊನಾ ವಿರುದ್ಧ ಕೈ ಜೋಡಿಸಿ ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಸಂದೇಶಕ್ಕೆ ಗಣಿ ಜಿಲ್ಲೆಯ ಜನತೆ ದೀಪ ಬೆಳಗಿಸುವ ಮೂಲಕ ಸಾಂಸ್ಕೃತಿಕ ವೈಭವ ಮೆರೆದರು.
ಬಳ್ಳಾರಿ ನಗರ, ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ, ಸಿರುಗುಪ್ಪ, ಕಂಪ್ಲಿ, ಸಂಡೂರು, ಕುರುಗೋಡು ಸೇರಿದಂತೆ ಪ್ರತಿ ತಾಲೂಕು, ಹಳ್ಳಿ, ಪಟ್ಟಣಗಳ ಮನೆ, ಮನೆಯ ಹೊರಗಡೆ, ಬಾಲ್ಕನಿಗಳಲ್ಲಿ ಗೃಹಿಣಿಯರು, ಯುವತಿಯರು, ಮಹಿಳೆಯರು 9ನಿಮಿಷಗಳ ಕಾಲ ದೀಪ ಬೆಳಗಿಸಿ ಸಂಭ್ರಮಿಸಿದರು.
ಮನೆಯಲ್ಲಿರುವ ವಿದ್ಯುತ್ ಆಫ್ ಮಾಡಿ ದೀಪ ಬೆಳಗಿಸಿದ್ದರಿಂದ ಸಂಕ್ರಮಣ ಕಾಲದ ಅಯ್ಯಪ್ಪ ಸ್ವಾಮಿಯ ಜ್ಯೋತಿಯ ದರ್ಶನದಂತೆ ದೀಪಗಳು ಎಲ್ಲೆಡೆ ಕಂಗೊಳಿಸಿದವು.
ಕೆಲವರು ಮೊಬೈಲ್ ಟಾಚರ್್ ಆನ್ ಮಾಡುವ ಮೂಲಕ ದೀಪದ ಕಾರ್ಯಕ್ಕೆ ಕೈ ಜೋಡಿಸಿದರು.
ಏಕಾಏಕಿ ವಿದ್ಯುತ್ ಬಂದ್ ಮಾಡಿ ನಿಗಧಿತ ಸಮಯ 9ಗಂಟೆಗೆ ದೀಪ ಬೆಳಗಿಸುವ ಮೂಲಕ ಜನತೆ ಧನ್ಯತಾ ಭಾವ ಮೆರೆದರು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 