ನರೇಗಾ ಕಾಮಗಾರಿ ಸ್ಥಳದಲ್ಲಿ PMJJY PMSBY ಅಭಿಯಾನ
ರೋಣ 14 :- ತಾಲೂಕಿನ ಯಾವಗಲ್ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರು ಬೇಸಿಗೆಯಲ್ಲಿ ಸಿಗುವ ಉದ್ಯೋಗವನ್ನು ಬಳಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಜೊತೆಗೆ ಎಲ್ಲರೂ ಕಒಎಎಙ ಕಒಖಃಙ ವಿಮೆಗಳನ್ನು ಮಾಡಿಸಿ ವಿಮೆಗಳಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಅದರ ಉಪಯೋಗ ಪಡೆದುಕೊಳ್ಳಿ ಅಂತಾ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ಹೇಳಿದರು.
ಗ್ರಾಮದಲ್ಲಿ ನಡಯುತ್ತಿರುವ ನರೇಗಾ ಸಾಮೂಹಿಕ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ ಅವರು ಉದ್ಯೋಗವನ್ನು ಅರಸಿ ಬೇರೆ ಕಡೆ ವಲಸೆ ಹೋಗದೆ ನಮ್ಮ ಗ್ರಾಮದಲ್ಲೇ ಸಿಗುವ ನರೇಗಾ ಕೂಲಿ ಕಾರ್ಮಿಕ ಕೆಲಸಗಳನ್ನು ಮಾಡಿ ಜೀವನವನ್ನು ಸಾಗಿಸಿ ಗುಳೆ ತಪ್ಪಿಸಿ ಎಂದು ಹೇಳಿದರು. ತಾಲೂಕಿನಲ್ಲಿ ಮಹಿಳಾ ಸಬಲಿಕರಣ ಮಾಡುವ ನಿಟ್ಟಿನಲ್ಲಿ ಸ್ತ್ರೀ ಚೇತನ ಅಭಿಯಾನವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರುಇನ್ನು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯು (ಕಒಎಎಃಙ) ಭಾರತ ಸರ್ಕಾರದ ಜೀವ ವಿಮಾ ಯೋಜನೆಯಾಗಿದ್ದು, ಕಡಿಮೆ ಆದಾಯದ ವರ್ಗಗಳಿಗೆ ಕೈಗೆಟಕುವ ಪ್ರೀಮಿಯಂನಲ್ಲಿ ಜೀವ ವಿಮೆ ಒದಗಿಸುತ್ತದೆ. ಯಾವುದೇ ಕಾರಣದಿಂದ (ನೈಸರ್ಗಿಕ/ಅನೈಸರ್ಗಿಕ) ವಿಮಾದಾರ ಸಾವೀಗೀಡಾದರೆ, ನಾಮಿನಿಗೆ ?2 ಲಕ್ಷ ವಿಮಾ ಮೊತ್ತ.ಕಡಿಮೆ ಕೊಡಲಾಗುತ್ತಿದ್ದು ವಾರ್ಷಿಕವಾಗಿ ?436 ರೂ ಗಳು ನೇರವಾಗಿ ನಿಮ್ಮ ಖಾತೆಯಿಂದ ಡೆಬಿಟ್ ಆಗುತ್ತದೆ, ಈ ಹಿನ್ನೆಲೆ 18-50 ವರ್ಷದವರು, ಉಳಿತಾಯ ಖಾತೆ ಹೊಂದಿದವರು ಇದನ್ನು ಮಾಡಿಸಿಕೊಳ್ಳಲು ಮನವಿ ಮಾಡಿದರು..ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಶಂಷಾದ್ ಬೇಗಮ್ ಬಾಬಾನಗರ ಮಾತನಾಡಿ ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ (ಕಒಖಃಙ) ಕೂಡಾ ಭಾರತ ಸರ್ಕಾರದ ಅಪಘಾತ ವಿಮಾ ಯೋಜನೆಯಾಗಿದ್ದು, ಇದು ಕಡಿಮೆ ವೆಚ್ಚದಲ್ಲಿ ಅಪಘಾತದಿಂದ ಉಂಟಾಗುವ ಮರಣ ಅಥವಾ ಅಂಗವೈಕಲ್ಯಕ್ಕೆ ಆರ್ಥಿಕ ರಕ್ಷಣೆ ನೀಡುತ್ತದೆ. ಇದಕ್ಕೆ ವಾರ್ಷಿಕವಾಗಿ ಕೇವಲ ?20 (ಆನ್ಲೈನ್ನಲ್ಲಿ ?19) ಪ್ರೀಮಿಯಂನೊಂದಿಗೆ, ಇದು ಎಲ್ಲಾ ಆದಾಯ ವರ್ಗದ ಜನರಿಗೆ ಅನೂಕಲವಾಗಿದ್ದು ,ಅಪಘಾತದಿಂದ ಸಾವು ಸಂಭವಿಸಿದರೆ, ನಾಮಿನಿಗೆ ?2 ಲಕ್ಷ ವಿಮಾ ಮೊತ್ತವನ್ನು ನೀಡಲಾಗುತ್ತದೆ.ಇದು ಕುಟುಂಬಕ್ಕೆ ಆರ್ಥಿಕ ಸ್ಥಿರತೆಯನ್ನು ಒದಗಿಸುತ್ತದೆ, ಮುಖ್ಯವಾಗಿ ಇದನ್ನು ಕಡಿಮೆ ಆದಾಯದ ಗುಂಪುಗಳು, ಅಸಂಘಟಿತ ವಲಯದ ಕಾರ್ಮಿಕರು, ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ.ಆಪತ್ತು-ಪೀಡಿತ ಪ್ರದೇಶಗಳಲ್ಲಿ ವಾಸಿಸುವವರು ಅಥವಾ ಅಪಾಯಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.
ಕಾರ್ಯಕ್ರಮ ದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶಿವಾನಂದ ಮೀಶಿ, ಗ್ರಾಮ ಪಂಚಾಯತಿ ಸದಸ್ಯರಾದ ಹೆಚ್ ಎಂ ಪಾಟೀಲ್, ಸಂತೋಷ್ ಕಮತಿ, ರೇಣುಕಾ ಕುರಿ, ಲಲಿತಾ ರೋಣದ, ಕೆಂಚಪ್ಪ ಮಾದರ್ ಸೇರಿದಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಭೊದ್ಲೆಖಾನ, ಸಂಜೀವಿನಿ ಕಾರ್ಯಕ್ರಮ ವ್ಯವಸ್ಥಾಪಕರಾದ ಗುರುಬಸಪ್ಪ ವೀರಾಪುರ್ ಹಾಗೂ ಸಂಜೀವಿನಿ ಸಿಬ್ಬಂದಿಗಳು ಹಾಗೂ ಕೂಲಿಕಾರರು ಭಾಗವಹಿಸಿದ್ದರು..