ಭಾವಸಾರ ಕ್ಷತ್ರಿಯ ಸಮಾಜದಿಂದ ಶ್ರೀರಾಮನ ತೊಟ್ಟಿಲೋತ್ಸವ

ಶಿಗ್ಗಾವಿ 21: ತಾಲೂಕಿನ ಬಂಕಾಪೂರ ಪಟ್ಟಣದ ಶಿಂಪಿಗಲ್ಲಿಯ ಶ್ರೀ ವಿಠಲ, ರುಕ್ಮಿಣಿ ಮಂದಿರದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಆಶ್ರಯದಲ್ಲಿ ಶ್ರೀ ರಾಮ ನವಮಿ ಅಂಗವಾಗಿ ಸುಮಂಗಲೆಯರಿಂದ ಶ್ರೀರಾಮನ ತೊಟ್ಟಿಲೋತ್ಸವ ಕಾರ್ಯಕ್ರಮ ಶಡಗರ ಸಂಭ್ರಮದಿಂದ ನಡೆಯಿತು. 

ತನ್ನಿಮಿತ್ಯ ಶ್ರೀ ವಿಠಲ, ರುಕ್ಮಿಣಿ ಮೂರ್ತಿಗೆ ವಿಶೇಷ ಪೂಜೆ ಕೈಂಕರ್ಯಗಳು, ಹೋಮ ಹವನಾದಿಗಳು ನಡೆದವು. ಕಿರ್ತನಕಾರ ಭಾನುದಾಸ ಸರ್ವದೆ ನೇತೃತ್ವದಲ್ಲಿ ಕಿರ್ತನೆ ರಾಮನಾಪ ಜಪ, ಹರಿನಾಮ ಭಜನೆ, ಭಕ್ತಿ ಗೀತೆಗಳ ಗಾಯನ ನಡೆದು ಜನಮನ ಸೂರಗೋಂಡಿತು. ನಂತರ ಭಕ್ತ ಸಮೂಹಕ್ಕೆ ಪಾನಕ, ಕೊಸಂಬರಿ ವಿತರಣೆ ನಡೆಯಿತು. 

ಈ ಸಂದರ್ಭದಲ್ಲಿ ಅಂಬರೀಶ ಸರ್ವದೆ, ರಾಮಚಂದ್ರ ತೇಲ್ಕರ್, ಸುರೇಶ ಸುಲಾಖೆ. ಪರಶುರಾಮ ಸುಲಾಖೆ, ವಿಕಾಶ ಪುಕಾಳೆ, ಸುಬ್ಬಣ್ಣ, ಸುರೇಶ ತೇಲ್ಕರ್, ವಿಠಲ, ಅಂಬರೀಶ್ ಸುಲಾಖೆ, ಮಹಿಳಾ ಮಂಡಲದ ಸದಸ್ಯರಾದ ಮುಕ್ತಾಬಾಯಿ, ವರ್ಷಾ ಪುಕಾಳೆ, ಜ್ಯೋತಿ ತೇಲ್ಕರ್, ಸ್ಮೀತಾ ಸರ್ವದೆ, ಶೈಲಾ ಕಲಾಲ, ‘ಹೇಮಾ ಪುಕಾಳೆ, ಅನುರಾಧಾ ರಾಂಪುರೆ, ಕವಿತಾ ಪಿಸೆ, ರತ್ನಾ, ಶಾರಧಾ ಸೇರಿದಂತೆ ಇತರರ ಇದ್ದರು.