ಏ.7 ರಂದು ಮುಧೋಳದಲ್ಲಿ ಶಿವದಾಸಿಮಯ್ಯನವರ ಜಯಂತ್ಯೋತ್ಸವ

ಶಿವಸಿಂಪಿ ಸಮಾಜದ ಕುಲಗುರು ಶಿವದಾಸಿಮಯ್ಯನವರ ಭಾವಚಿತ್ರ

ಮುಧೋಳ 05: ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ದಿ ಸಂಘ ಮುಧೋಳ ವತಿಯಿಂದ ಏ.7 ರಂದು ಸಂಜೆ 5 ಗಂಟೆಗೆ ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶಿವಸಿಂಪಿ ಸಮಾಜದ ಕುಲಗುರು ಜಗದಾಚಾರ್ಯ ಶಿವದಾಸಿಮಯ್ಯ ನವರ ಜಯಂತ್ಯೋತ್ಸವ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಮೆಳ್ಳಿಗೇರಿಯ ರಾಮಯೋಗಿ ಪುಣ್ಯಾಶ್ರಮದ ಜ್ಞಾನಮಯಾನಂದ ಮಹಾಸ್ವಾಮಿಜಿ ದಿವ್ಯ ಸಾನಿಧ್ಯವಹಿಸುವರು, ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ದಿ ಸಂಘದ ಮುಧೋಳ ತಾಲೂಕಾ ಘಟಕದ ಅಧ್ಯಕ್ಷ ಪ್ರಕಾಶ ಈ. ಗಂಗಣ್ಣವರ ಅಧ್ಯಕ್ಷತೆವಹಿಸುವರು, ಖ್ಯಾತ ಶಸ್ತ್ರ ಚಿಕಿತ್ಸಕ, ಸಾಹಿತಿ ಡಾ.ಶಿವಾನಂದ ಮ. ಕುಬಸದ ಕಾರ್ಯಕ್ರಮ ಉದ್ಘಾಟಿಸುವರು, ರಬಕವಿಯ ಖ್ಯಾತ ಸಾಹಿತಿ ರೇವಣಸಿದ್ದಪ್ಪ ವೀ. ಗೌಡರ ಮುಖ್ಯ ಅತಿಥಿ ಸ್ಥಾನವಹಿಸಿ ಶಿವದಾಸಿಮಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡುವರು, ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷೆ ಕಮಲಾ ಶಿ. ಕುಬಸದ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಆರ್‌. ಬದಾಮಿ ವೇದಿಕೆ ಮೇಲೆ ಉಪಸ್ಥಿತರಿರುವರು ಎಂದು ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಶಂ. ಮುನವಳ್ಳಿ ಹಾಗೂ ಸಂಘಟನಾ ಕಾರ್ಯದರ್ಶಿ ರಾಜು (ವಿಶ್ವನಾಥ) ಅ. ಯಲ್ಲಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.