ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರಕ್ಕೆ ರಾಗಿಣಿ ದ್ವಿವೇದಿ ನಾಯಕಿ

ಬೆಂಗಳೂರು 07: ಜಟ್ಟ ಮತ್ತು ಮೈತ್ರಿಯಂತಹ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಬಿಎಂ ಗಿರಿರಾಜ್ ಸದ್ಯ ಗುರುದೇಶಪಾಂಡೆಯವರ ಜಿ ಸಿನಿಮಾಸ್ ಮೂಲಕ 'ರಾಮರಸ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಮಧ್ಯೆ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಈಗಾಗಲೇ ತಮ್ಮ ಮುಂದಿನ ಯೋಜನೆಗೆ ಸಜ್ಜಾಗುತ್ತಿದ್ದಾರೆ.

ಸೈಕಲಾಜಿಕಲ್ ಥ್ರಿಲ್ಲರ್ ಆಗಿರುವ ಈ ಚಿತ್ರಕ್ಕೆ ರಾಗಿಣಿ ದ್ವಿವೇದಿ ನಾಯಕಿಯಾಗಿದ್ದಾರೆ ಎಂದು ಭಾನುವಾರ ಚಿತ್ರತಂಡ ಘೋಷಿಸಿದೆ. ಮೇ 24 ರಂದು ನಟಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ತಾರಾಗಣ, ಕಥಾವಸ್ತು ಮತ್ತು ಫಸ್ಟ್ ಲುಕ್ ಪೋಸ್ಟರ್‌ಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದಿದೆ. ರಾಮಕೃಷ್ಣ ನಿಗಡೆ ಹೊಂಬಣ್ಣ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಗಿರೀಶ್ ಗೌಡ ಅವರ ಮೇಲ್ವಿಚಾರಣೆ ನಡೆಸಲಿದ್ದಾರೆ.

ರಾಗಿಣಿ ದ್ವಿವೇದಿ ಅವರು ಚಿತ್ರದ ಭಾಗವಾಗಿರುವ ಕುರಿತು ಚಿತ್ರತಂಡ ಘೋಷಿಸಿದ್ದರೂ, ಇನ್ನುಳಿದ ತಾರಾಗಣವನ್ನು ಅಂತಿಮಗೊಳಿಸಿಲ್ಲ.