ಯರಗಟ್ಟಿ 16: ಪಟ್ಟಣದ ಬೀರದೇವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಕರವೇ ಅಧ್ಯಕ್ಷ ನಾರಾಯಣಗೌಡ ಅವರ ಹುಟ್ಟು ಹಬ್ಬದ ನಿಮಿತ್ಯ ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಶಸ್ತ್ರಚಿಕಿತ್ಸ ಕಾರ್ಯಕ್ರಮಕ್ಕೆ ಕರವೇ ತಾಲೂಕಾಧ್ಯಕ್ಷ ರಫೀಕ ಡಿ ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಇಮಾಮಸಾಬ ಹುಸೇನನಾಯಕ, ಮಂಜು ಬಾವಿಹಾಳ, ವಿಠ್ಠಲ ಹಾರುಗೋಪ್ಪ, ಈರಣ್ಣ ಕಿಲಾರಿ, ಕೆಂಚಪ್ಪ ಚುಂಚನೂರ, ಶಿದಪ್ಪ ಗೌಳಿ, ಶೇಖರ್ ಕಿಲಾರಿ, ಮಲಿಕ ಚಾಂದಖಾನ್ನವರ, ಮದಾರ ಚಾಂದಖಾನ್ನವರ ಸೇರಿದಂತೆ ನದಾಫ ಹೈಟೆಕ್ ಕಣ್ಣಿನ ಆಸ್ಪತ್ರೆ ವೈದ್ಯರು ಹಾಗೂ ಸಾರ್ವಜನಿಕರು ಇದ್ದರು.