ನೇಹಾ ಕೊಲೆಯನ್ನು ಖಂಡಿಸಿ ಮೇಣದ ಬತ್ತಿ ಹಚ್ಚಿ ಪ್ರತಿಭಟನೆ
ಸಿಂದಗಿ 24: ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆಯನ್ನು ಖಂಡಿಸಿ ರವಿವಾರ ಮಹಿಳಾ ಜಾಗರಣ ವೇದಿಕೆಯಡಿಯಲ್ಲಿ ವಿವಿಧ ಮಹಿಳಾ ಸಂಘ ಟನ್ಗಳಿಂದ ಮೇಣದ ಬತ್ತಿಯನ್ನು ಉರಿಸಿ ಪ್ರತಿಭಟನೆ ನಡೆಸಿದರು.
ಮಹಿಳಾ ಜಾಗರಣ ವೇದಿಕೆಯ ಅಧ್ಯಕ್ಷೆ ಶೈಲಜಾ ಸ್ಥಾವರಮಠ, ಮಾತನಾಡಿ, ನೇಹಾನನ್ನು ಕೊಂದ ವ್ಯಕ್ತಿಯನ್ನು ಕಠಿಣ ಶಿಕ್ಷೆ ನೀಡಿ ನೇಣಿಗೆ ಏರಿಸಬೇಕು. ನಮ್ಮ ದೇಶದ ಕಾನೂನು ಬದಲಾಗಬೇಕು. ವಿಕೃತ ಮನಸ್ಸಿನ ಕ್ರೂರತ್ವ ಮೃಗುತ್ವ್ ಮೆರೆಯುತ್ತಿರುವ ಪೀಳಿಗೆಗಳಿಗೆ ಕಡಿವಾಣ ಹಾಕಲು ಇದೆ ಕಾನೂನು ಬದಲಾವಣೆ ಮಾಡಲೇಬೇಕು. ಇಂತಹ ಮನಕುಲುಕುವ ಸಂದರ್ಭದಲ್ಲಿ ಯಾವ್ ನ್ಯಾಯವಾದಿಗಳು ಅಪರಾಧಿ ಪರ ವಾದ ಮಂಡಿಸಬಾರದು. ಆಗ ಮಾತ್ರ ಅವಳ ಆತ್ಮಕ್ಕೆ ಶಾಂತಿ ದೊರಕಲಿದೆ. ಮಹಿಳೆಯನ್ನು ಪೂಜಿಸುವ ದೇಶದಲ್ಲಿ ಈ ರೀತಿಯ ಪ್ರಕರಣಗಳು ಸಲ್ಲದು ಎಂದರು.
ವೀರಶೈವ ಮಹಾ ಸಭಾದ ಅಧ್ಯಕ್ಷೆ ಮಹಾದೇವಿ ಹಿರೇಮಠ, ಪದಾಧಿಕಾರಿಗಳ ಶಂಕುತಲಾ ಹಿರೇಮಠ, ನೀವೇದಿತಾ ಸಂಸ್ಥೆಯ ರಾಜೇಶ್ವರಿ ಪಾಟೀಲ. ಮೇನಕಾ ಗುಡ್ಡಳ್ಳಿ, ಜಾನಪದ ಪರಿಷತ್ತಿನ ಶೈನಾಬಿ ಮಸಳಿ, ಸಾಹಿತ್ಯ ಪರಿಷತ್ತಿನ್ ಶೋಭಾ ಚಿಗರಿ, ಸ್ನೇಹಾ ಸಂಸ್ಥೆ ಯ ಅಧ್ಯಕ್ಷೆ ಶಾರದಾ ಮಂಗಳೂರ, ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಅಂಗಡಿ, ರೈತ ಸಂಘದ ಅಧ್ಯಕ್ಷ ಶ್ಯಾಮಲಾ ಮಂದೇವಾಲಿ ಪದಾಧಿಕಾರಿಗಳಾದ ರೇಣುಕಾ ಮನೂರ, ಬಸಮ್ಮ ಹೋಡ್ಲಾ, ವಿಜಯಲಕ್ಷ್ಮಿ ಹೀರೆಮಠ್. ಮಾಹಾದೇವ ಅಂಬಲಿ, ಪ್ರಶಾಂತ ಬಿರಾದಾರ ಸೇರಿದಂತೆ ಅನೇಕರು ಇದ್ದರು.