ನೇಹಾ ಹತ್ಯೆ ಖಂಡನೀಯ: ಕುಮಾರ

ಸಿಂದಗಿ 22: ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಮಾನವ ಕುಲವೇ ತಲೆ ತಗ್ಗಿಸುವಂಹ ಕೃತ್ಯವಾಗಿದೆ. ಈ ಘಟನೆ ಯಾರು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಮನಸ್ಕೃತಿ ಹೊಂದಿದ ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಮತ್ತು ಅವನಿಗೆ ನೀಡುವ ಶಿಕ್ಷೆ ಮುಂದೆ ಅಂತಹ ಮನಸ್ಕೃತಿ ಇರುವ ದ್ರೋಹಿಗಳಿಗೆ ಭಯ ಹುಟ್ಟಿಸುವಂತಿರಬೇಕು ಎಂದು ಸಿಂದಗಿ ಯುತ್ ಕಾಂಗ್ರೆಸ್ ಅಧ್ಯಕ್ಷ ಕುಮಾರ ದೇಸಾಯಿ ಒತ್ತಾಯಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹುಬ್ಬಳ್ಳಿ ಪ್ರಕರಣವನ್ನು ಸರ್ಕಾರ ಗಂಭಿರವಾಗಿ ತೆಗೆದುಕೊಂಡಿದೆ ಮತ್ತು ಆರೋಪಿ ಕಾನೂನು ರೀತಿಯಲ್ಲಿ ಶಿಕ್ಷೆ ನೀಡುತ್ತದೆ. ಇಲ್ಲಿ ಬಿಜೆಪಿಯವರು ಸಾವಿನ ಮನೆಯಲೂ ರಾಜಕೀಯ ಮಾಡುತ್ತಿದ್ದಾರೆ. ಅದು ಸರಿ ಅಲ್ಲ ಯಾವುದೇ ಸರ್ಕಾರ ಇರಲಿ ಯಾರೇ ಮುಖ್ಯಮಂತ್ರಿಗಳು ಇರಲಿ ಇಂತಹ ಘಟನೆಗಳಿಗೆ ಸಾಥ ನೀಡಲ್ಲ, ಅದಕ್ಕೆ ತನ್ನದೇಯಾದ ಕಾನೂನು ಇರುತ್ತದೆ ಕಾನೂನು ರೀತಿಯಲ್ಲಿಯೇ ಕ್ರಮ ಜರಗಿಸಬೇಕಾಗುತ್ತದೆ, ಅದನ್ನು ಬಿಟ್ಟು ಬಿಜೆಪಿಯವರು ಕಾನೂನು ಕೈಗೆತೆಗೆದುಕೊಳ್ಳಿ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ, ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕೂಡಾ ಹಲವಾರು ಪ್ರಕರಣಗಳು ನಡೆದಿವೆ ಆಗಲೂ ಕೂಡಾ ಕಾನೂನು ರೀತಿಯಲ್ಲಿಯೇ ಕ್ರಮ ಜರುಗಿಸಿದ್ದಾರೆ ಈಗಲೂ ಹಾಗೆ ಮಾಡಬಹುದು ಆದರೆ ಅದನೇ ಬಂಡವಾಳ ಮಾಡಿಕೊಂಡು ಬೇರೆಯವರ ಸಾವಿನ ಮೇಲೆ ರಾಜಕೀಯ ಮಾಡುವ ಸಂಸ್ಕೃತಿ ಬಿಜೆಪಿಯವರು ಬಿಡಬೇಕು ಎಂದು ಟ್ವೀಟ್ ಮಾಡಿದ್ದಾರೆ.