ಇಂದು ಬಳ್ಳಾರಿಗೆ ಸಚಿವ ಎಸ್‌.ಮಧು ಬಂಗಾರಪ್ಪ

Minister S. Madhu Bangarappa to visit Ballari on June 16

ಬಳ್ಳಾರಿ 16 :ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರಾದ ಎಸ್‌.ಮಧು ಬಂಗಾರಪ್ಪಾ ಅವರು ಜೂ.16 ರಂದು ಬಳ್ಳಾರಿಗೆ ಆಗಮಿಸುವರು.ಅಂದು ಬೆಳಿಗ್ಗೆ 09 ಗಂಟೆಗೆ ನಗರದ ಅನಂತಪುರ ರಸ್ತೆಯ ಬಿ.ಪಿ.ಎಸ್‌.ಸಿ ಶಾಲೆಯ ಸಭಾಂಗಣದಲ್ಲಿ ಏರಿ​‍್ಡಸಿರುವ ಸೋಲಿಲ್ಲದ ಸರದಾರ (ಸಾಕ್ಷ್ಯಚಿತ್ರ-2) ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸುವರು.

ಬಳಿಕ ಬೆಳಿಗ್ಗೆ 11.30 ಕ್ಕೆ ನಗರದ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವರು.ನಂತರ ಮಧ್ಯಾಹ್ನ 01 ಗಂಟೆಗೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಕಾರ್ಯಕರ್ತರ ಭೇಟಿ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.ಬಳಿಕ ಮಧ್ಯಾಹ್ನ 02 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಪ್ರಗತಿ ಪರೀಶೀಲನಾ ಸಭೆ ನಡೆಸುವರು. ನಂತರ ಸಂಜೆ 04 ಗಂಟೆಗೆ ಬೆಂಗಳೂರಿಗೆ ತೆರಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.