ಬೆಳಗಾವಿ 16: ಸಂತ ರೋಹಿದಾಸ ಕಾಲನಿ ಉದ್ಯಮಬಾಗ ನಿವಾಸಿ ಪವನಕುಮಾರ ಮಹಾದೇವ ಪಾಟೀಲ ಎಂಬಾತ ಉದ್ಯಮಬಾಗ ಬೆಮ್ಕೋ ಕ್ರಾಸ್ ಬಳಿ ಗಾಂಜಾ ಸೇವನೆ ಮಾಡುತ್ತಿದ್ದಾಗ ಉದ್ಯಮಬಾಗ ಠಾಣೆಯ ಪಿಐ ಡಿ.ಕೆ. ಪಾಟೀಲ ಹಾಗೂ ಸಿಬ್ಬಂದಿಯವರು ದಾಳಿ ಮಾಡಿದ್ದು, ಅವನನ್ನು ವಶಕ್ಕೆ ಪಡೆದು ಆತನ ವಿರುದ್ಧ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.