ಹೆಣ್ಣಿನ ಮೇಲಿನ ದೌರ್ಜನ್ಯ ನಿಲ್ಲಲಿ : ಲಕ್ಷ್ಮಣ ಕಿಶೋರ
Let's stop violence against women: Lakshman Kishor
ಮಹಾಲಿಂಗಪುರ 21: ಹೆಣ್ಣು ಸಬಲೆಯಲ್ಲ, ಅವಳಿಗೆ ಉತ್ತಮ ಶಿಕ್ಷಣ ನೀಡಿದರೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುತ್ತಾಳೆ. ಬಾಲ್ಯವಿವಾಹ, ಅತ್ಯಾಚಾರ ಹೀಗೆ ಹೆಣ್ಣಿನ ಮೇಲಿನ ದೌರ್ಜನ್ಯ ಹೆಚ್ಚಾಗಿದ್ದು ತಡೆಯುವ ಕಾರ್ಯ ನಮ್ಮಿಂದಾಗಬೇಕು. ಅಪಾರಜ್ಞಾನವನ್ನು ಹೊಂದಿ ಒಳ್ಳೆ ಅಧಿಕಾರ ಪಡೆದು ಮನೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊಂದಿರುತ್ತಾಳೆ ಎಂದು ಪತ್ರಕರ್ತ ಲಕ್ಷ್ಮಣ ಕಿಶೋರ ಹೇಳಿದರು.ಸ್ಥಳೀಯ ಕೆಂಗೇರಿಮಡ್ಡಿಯ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದ ಗರ್ಲ್ಸ್ ಐಕಾನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಂಯೋಜಕಿ ತೇಜಸ್ವಿನಿ ಭಜಂತ್ರಿ ಮಾತನಾಡಿ ಮಿಲಾನ್ ಸಂಸ್ಥೆಯು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. 12 ರಿಂದ 18 ವರ್ಷದ ಒಳಗಿನ ಹೆಣ್ಣು ಮಕ್ಕಳನ್ನು ಒಳಗೊಂಡು, ಅದರಲ್ಲೂ ಗರ್ಲ್ಸ್ ಐಕಾನ್ ನಲ್ಲಿ ಹೆಣ್ಣು ಮಕ್ಕಳಿಗೆ ಉಚಿತವಾಗಿ ಮೊಬೈಲ್, ಶಾಲಾ ಚೀಲ, ಪುಸ್ತಕ ವಿತರಣೆ ಮಾಡುತ್ತಿದೆ. ಹೆಚ್ಚಾಗಿ ಹೆಣ್ಣು ಮಕ್ಕಳ ಬಾಲ್ಯ ವಿವಾಹ ತಡೆದು ಅವರಿಗೆ ನಾಯಕತ್ವದ ತರಬೇತಿ ನೀಡಿ ಬಲಪಡಿಸುತ್ತಿದೆ ಎಂದರು.
ನಂತರ ಅತಿಥಿ ಸಿದ್ದಣ್ಣ ರಾಮೋಜಿ, ಗರ್ಲ್ಸ್ ಐಕಾನ್ಸ್ನ ಸಂಜನಾ ಮರೆಗೊಂಡ ಮತ್ತು ಪ್ರಿಯಾಂಕಾ ಚಿಚಖಂಡಿ ಮಾತನಾಡಿದರು. ಗರ್ಲ್ಸ್ ಐಕಾನ್ನ ಸಾವಕ್ಕಾ, ಪವಿತ್ರಾ, ರೂಪಾ, ಸರಿತಾ, ಲಕ್ಷ್ಮಿ, ಸಾವಿತ್ರಿ, ಗಾಯತ್ರಿ, ಪ್ರಿಯಾಂಕಾ, ಶೇಶಮ್ಮ, ರಾಧಿಕಾ, ಮಂಜುಳಾ, ಲಕ್ಷ್ಮೀ, ಐಶ್ವರ್ಯಾ, ಲಕ್ಷ್ಮೀ, ಹರ್ಷಿತಾ, ರಾಜೇಶ್ವರಿ ಎಲ್ಲ ಹೆಣ್ಣು ಮಕ್ಕಳು ನೃತ್ಯ, ನಾಟಕ ಮಾಡಿ ಜನರನ್ನು ಮನರಂಜಿಸಿದರು. ಆಹ್ವಾನಿತರಿಗೆ ಲೇಖನಿಗಳನ್ನು ನೀಡಿ ಸನ್ಮಾನಿಸಲಾಯಿತು.ಪುರಸಭೆ ಸದಸ್ಯ ಶೇಖರ ಅಂಗಡಿ, ಲಕ್ಷ್ಮಣ್ ಮರೆಗೊಂಡ, ಮಹಾಲಿಂಗ ಮರೆಗೊಂಡ, ಮಹೇಶ ಆರಿ, ಹನಮಂತ ನಾವಿ, ನಾಗಲಿಂಗ ಬಡಿಗೇರ, ರಾಜೇಂದ್ರ ನಾವಿ, ಈರಯ್ಯ ಮಠಪತಿ, ಪರಶುರಾಮ ಬಂಡಿ, ಮಹಾಂತೇಶ ದೇವರಮನಿ ಸೇರಿದಂತೆ ಗ್ರಾಮದ ಮಹಿಳೆಯರಿದ್ದರು. ಸಂಜನಾ ಮರೆಗೊಂಡ ನಿರೂಪಿಸಿ, ವಂದಿಸಿದಳು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 