28ರಿಂದ ಜಂಬಗಿಸದಾಶಿವ ಮಹಾರಾಜರ ಜಾತ್ರೆ
ಸಂಬರಗಿ 25: ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಜಂಬಗಿಯಲಿ ಸದಾಶಿವ ಮಹಾರಾಜರ ಯಾತ್ರೆ ಏಪ್ರಿಲ್ 28ರಿಂದ ಮೇ 1ರವರೆಗೆ ನಡೆಯಲಿದೆ.
ಏಪ್ರಿಲ್ 28 ರಂದು ಜಾತ್ರೆ ಪ್ರಾರಂಭ. 29ರಂದು ಬೆಳಿಗ್ಗೆ 7ಗಂಟೆಗೆ ದೇವರಿಗೆ ಕೃಷ್ಣಾ ನದಿ ನೀರಿನಿಂದ ಅಭಿಷೇಕ ಪಾಲಕಿ ಮೆರವಣಿಗೆ. ರಾತ್ರಿ 9 ಗಂಟೆಗೆ ಸುಕ್ಷೇತ್ರ ಬಬಲಾದಿಮಠದ ಓಂಕಾರ ಮಹಾಸ್ವಾಮೀಜಿ ಅವರಿಂದ ಪ್ರವಚನ ಕಾರ್ಯಕ್ರಮ ಏಪ್ರಿಲ್ 30ರಂದು ಶಿವಲೀಲತಾಯಿ ಪಾಟೀಲ ಅವರಿಂದ ರಾತ್ರಿ 9 ಗಂಟೆಗೆ ಕೀರ್ತನೆ ಮುಂಜಾನೆಯಲ್ಲಿ ಡಾಗ್ ರೇಸ್, ಬೈಸಿಕಲ್ ರೇಸ್, ಸ್ಲೋ ಮೋಟಾರ್ ಸೈಕಲ್ ರೇಸ್ ಆಯೋಜಿಸಲಾಗಿದೆ.
ಮೇ 1ರಂದು ಸಂಜೆ ಗೋಲ್ಡನ್ ಸ್ಟಾರ್ ಕೊಲ್ಲಾಪುರ ಆರ್ಕೆಸ್ಟ್ರಾ ಬೆಳಿಗ್ಗೆ ಜೋಡು ಎತ್ತಿನ ಗಾಡಿ ಶರ್ಯತ್ತು ಮತ್ತು ಸಣ್ಣ ಎತ್ತಿನ ಗಾಡಿ ಶರ್ಯತ್ತು, ಕುದುರೆ ಗಾಡಿ ಶರ್ಯತ್ತನ್ನು ಆಯೋಜಿಸಲಾಗಿದೆ.
ಯಾತ್ರೆಗೆ ಬರುವ ಭಕ್ತರಿಗೆ ಅಥಣಿ, ಕವಠೆಮಂಹಕಾಳ, ಮೀರಜ್, ಅಥಣಿ ಘಟಕದಿಂದಾ ಬಸ ಸೌಲಭ್ಯವಿದೆ. ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಯಾತ್ರಾ ಸಮಿತಿಯಿಂದ ಮನವಿ ಮಾಡಲಾಗಿದೆ.