ಬೆಳಗಾವಿ 16: ಇಸ್ಪೀಟ್ ಎಲೆಗಳ ಮೇಲೆ ಹಣ ಕಟ್ಟಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ದಾಳಿ ನಡೆಸಿದ ಮಾರ್ಕೇಟ್ ಠಾಣೆಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ 4150 ರೂ. ಹಾಗೂ ಇಸ್ಪಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಅನಗೋಳ ರಘುನಾಥ ಪೇಟ ನಿವಾಸಿ ಮಲಾದ ಬಾಬಾಜಾನ ಖಾನಾಪೂರೆ(42), ಬೆಳಗಾವಿ ಸಮರ್ಥ ನಗರ ನಿವಾಸಿ ರಾಜು ಶಂಕರ್ಪ ಹುಬ್ಬಳ್ಳಿ(34), ಬೆಳಗಾವಿ ನನದಿ, ಮಾರ್ಕಾಂಡೇಯ ನಗರ ನಿವಾಸಿ ಯಲ್ಲಪ್ಪ ಭೀಮರಾಯ ಪೆಂಡಾರಿ(50), ಬೆಳಗಾವಿ ಜಿಲ್ಲೆ ಕರಗುಪ್ಪಿ ನಿವಾಸಿ ಸತ್ಯಪ್ಪ ಅಣ್ಣಪ್ಪ ಗುಟಗುದ್ದಿ(55), ಬೆಳಗಾವಿ ಕಂಗ್ರಾಳಿ ಗಲ್ಲಿ ನಿವಾಸಿಗಳಾದ ಪ್ರಭಾಕರ ಪ್ರಕಾಶ ದರವಂದರ(33), ಮಾರುತಿ ನಿಂಗಪ್ಪ ಇಂಚಲ ಬಂಧಿತ ಆರೋಪಿಗಳಾಗಿದ್ದು, ಮಾರ್ಕೇಟ್ ಪೊಲೀಸ್ ಠಾಣೆ ಪಿಎಸ್ಐ ವಿಠ್ಠಲ ಹಾವನ್ನವರ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಪೊಲೀಸರ ಈ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಬೊರಸೆ ಭೂಷಣ್ ಗುಲಾಬರಾವ್ ಅವರು ಶ್ಲಾಘಿಸಿದ್ದಾರೆ.