ಡಾ. ದೀಪಾ ಎಮ್ ಕುಡಚಿರವರಿಗೆ ಗೌರವ ಡಾಕ್ಟರೇಟ ಸನ್ಮಾನ

ಬೆಳಗಾವಿ 09:  ನಮ್ಮ ಬ್ಯಾಂಕಿನ ನಿರ್ದೇಶಕಿಯಾದ ಡಾ. ದೀಪಾ ಮಹಾಂತೇಶ ಕುಡಚಿ ಇವರು ಸಾಮಾಜಿಕ ಕ್ಷೇತ್ರದಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯವಾಗಿ ಜನಹಿತ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅವರ ಈ ಸೇವೆಯನ್ನು ಗುರುತಿಸಿ ಮಧ್ಯಪ್ರದೇಶ ರಾಜ್ಯದ ಭೋಪಾಲದಲ್ಲಿರುವ ಪಂಡಿತ ದೀನ ದಯಾಲ ವಿಶ್ವವಿದ್ಯಾಲಯವು ಅವರಿಗೆ ದಿ.24ರಂದು ಗೌರವ ಡಾಕ್ಟರೇಟ ಪದವಿ ನೀಡಿ ಸನ್ಮಾನಿಸಿದೆ.  

ಈ ಸಂದರ್ಭವಾಗಿ ದಿ. 08ರಂದು ಜರುಗಿದ ನಿರ್ದೇಶಕ ಮಂಡಳಿ ಸಭೆಯಲ್ಲಿ ನಿರ್ದೇಶಕಿಯಾದ ಡಾ.ದೀಪಾ ಮಹಾಂತೇಶ ಕುಡಚಿ ಇವರನ್ನು ಬ್ಯಾಂಕಿನ ಅಧ್ಯಕ್ಷ ಬಸವರಾಜ ವಿ. ಉಪ್ಪಿನ, ಉಪಾಧ್ಯಕ್ಷ ಗೀರೀಶ ವಿ. ಬಾಗಿ ಹಾಗೂ ನಿರ್ದೇಶಕ ಬಾಳಪ್ಪಾ ಬಿ. ಕಗ್ಗಣಗಿ, ವಿಜಯಕುಮಾರ ಸಿ.ಅಂಗಡಿ, ರಮೇಶ ಎಮ್‌. ಕಳಸಣ್ಣವರ, ಪ್ರಕಾಶ ಎಮ್‌. ಬಾಳೇಕುಂದ್ರಿ, ರಮೇಶ ಎಸ್‌. ಸಿದ್ದಣ್ಣವರ, ಬಸವರಾಜ ವಿ. ಝೆಂಡ, ಸರಳಾ ಎಸ್‌. ಹೇರೆಕರ, ಗೀರೀಶ ಎಸ್‌. ಕತ್ತಿಶೆಟ್ಟಿ, ಸಚಿನ ಆರ. ಶಿವಣ್ಣವರ, ಸತೀಶ ಕೆ. ಪಾಟೀಲ, ಚಂದ್ರಕಾಂತ ಎಚ್‌. ಕಟ್ಟಿಮನಿ, ತಜ್ಞ ನಿರ್ದೇಶಕ ಮಹಾದೇವ ಎಮ್‌. ಅಥಣಿ,  ಚಂದ್ರಶೇಖರ ಎ. ಹಿರೇಮಠ ಹಾಗೂ ಜನರಲ್ ಮ್ಯಾನೇಜರ ಎಸ್‌.ಎಸ್‌.ವಾಲಿ, ಮತ್ತು ಡೆಪ್ಯುಟಿ ಜನರಲ್ ಮ್ಯಾನೇಜರ ಬಿ.ಜಿ.ನ್ಯಾಮಗೌಡ ಇವರು ಅಭಿನಂದಿಸಿದರು.ಈ ಸಂದರ್ಭದಲ್ಲಿ ಅಧ್ಯಕ್ಷರು ಮಾತನಾಡಿ ಈ ಡಾಕ್ಟರೇಟ ಪದವಿಯು ನಿರ್ದೇಶಕಿಯಾದ ಡಾ. ದೀಪಾ ಮಹಾಂತೇಶ ಕುಡಚಿ ಇವರಿಗೆ ಇನ್ನೂ ಹೆಚ್ಚಿನ ಹುಮ್ಮಸ್ಸಿನಿಂದ ಸಮಾಜ ಸೇವೆ ಹಾಗೂ ರಾಜಕೀಯವಾಗಿ ಜನಪರ ಸೇವೆಗೈಯಲು ಪ್ರೇರಣೆಯಾಗಲಿ, ಅವರಿಗೆ ಹೆಚ್ಚಿನ ಶಕ್ತಿ ಸಾಮರ್ಥ್ಯಗಳನ್ನು ನೀಡಲಿ ಹಾಗೂ ಇನ್ನೂ ಹೆಚ್ಚಿನ ಉನ್ನತ ಸ್ಥಾನಮಾನಗಳು ಅವರಿಗೆ ಲಭಿಸಲಿ ಎಂದು ವೈಯಕ್ತಿವಾಗಿ ಮತ್ತು ಸಂಸ್ಥೆಯ ಪರವಾಗಿ ಶುಭ ಹಾರೈಸಿದರು. ಇದು ನಮ್ಮ ಸಂಸ್ಥೆಗೂ ಹೆಮ್ಮೆಯ ವಿಷಯವಾಗಿದೆ ಎಂದು ಅಧ್ಯಕ್ಷರು ತಮ್ಮ ಸಂಸತ ವ್ಯಕ್ತಿಪಡಿಸಿದರು.