ಜಾನುವಾರು ಕಳ್ಳತನ ಪತ್ತೆಗೆ ಕ್ರಮ ಕೈಗೊಳ್ಳಲು ಒತ್ತಾಯ: ರೈತ ಸಂಘ
Farmers' association demands action to detect cattle theft
ಲೋಕದರ್ಶನ ವರದಿ
ಹೂವಿನಹಡಗಲಿ 12: ತಾಲೂಕಿನ ನಾನಾ ಕಡೆಗಳಲ್ಲಿ ಜಾನುವಾರು ಮತ್ತು ಎತ್ತುಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಕೂಡಲೇ ಪೊಲೀಸ್ ಇಲಾಖೆ ಪತ್ತೆಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ಪೊಲೀಸರಿಗೆ ಮನವಿ ಸಲ್ಲಿಸಲಾಯಿತು.ತಾಲೂಕಿನ ಹೊಳಗುಂದಿ ಗ್ರಾಮದ ಕೆ.ಎಂ. ಶಿವಕುಮಾರ ಅವರಿಗೆ ಸೇರಿದ್ದ ಕಣದಲ್ಲಿ ಇದ್ದ 2 ಲಕ್ಷ ಮೌಲ್ಯದ 2 ಎತ್ತುಗಳು, ಬೀರಬ್ಬಿ ಗ್ರಾಮದ ದಿನಕರ ಹಾಗೂ ಪಟ್ಟಣದ ಹೊನ್ನೂರು ರಸ್ತೆಯಲ್ಲಿನ ಜಾನುವಾರು ಕಳ್ಳತನವಾಗಿದೆ. ಜೀವನೋಪಾಯಕ್ಕಾಗಿ ಎತ್ತುಗಳನ್ನು ರೈತರು ಸಾಕುತ್ತಿದ್ದರು. ಆದರೆ, ಕಳ್ಳರ ಕಾಟಕ್ಕೆ ರೈತರು ರೋಸಿ ಹೋಗಿದ್ದಾರೆ. ಆದ್ದರಿಂದ ರೈತರ ಜಾನುವಾರು ಮತ್ತು ಎತ್ತುಗಳನ್ನು ಪತ್ತೆ ಮಾಡಬೇಕೆ0ದು ಮನವಿ ಸಲ್ಲಿಸಿದ್ದಾರೆ. ಜಾನುವಾರು ಮತ್ತುಸಂಘದ ತಾಲೂಕು ಅಧ್ಯಕ್ಷ ಎಚ್. ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ, ಜಯಪ್ಪ, ಕೆ. ಮಂಜುನಾಥ, ಹುಲುಗಪ್ಪ, ಮೆಹಬೂಬ್ ಸಾಬ್, ಕೆ.ಎಂ. ಶಿವಕುಮಾರ, ಗೀರೀಶ ಸೇರಿದಂತೆ ಇತರರು ಸಿಪಿಐ ಮಲ್ಲಪ್ಪ ಹೂಗಾರ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 