ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡುಕಟ್ಟುಗಳ ಒಕ್ಕೂಟದ ರಾಜ್ಯ ಅಧ್ಯಕ್ಷರಾಗಿ.ಡಾ.ಕೆ.ಎಂ.ಮೈತ್ರಿ
Dr. K.M. Maithri as the State President of the Federation of Nomadic and Semi-Nomadic Free Tribes
ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡುಕಟ್ಟುಗಳ ಒಕ್ಕೂಟದ ರಾಜ್ಯ ಅಧ್ಯಕ್ಷರಾಗಿ.ಡಾ.ಕೆ.ಎಂ.ಮೈತ್ರಿ
ಕಂಪ್ಲಿ 10: ತಾಲೂಕು ಸಮೀಪದ ಬುಕ್ಕಸಾಗರ ಗ್ರಾಮದ ಈರಣ್ಣ ಕ್ಯಾಂಪಿನಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ, ಅರೆಅಲೆಮಾರಿ ವಿಮುಕ್ತ ಬುಡುಕಟ್ಟುಗಳ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು. ಡಾ.ಕೆ.ಎಂ.ಮೈತ್ರಿ(ರಾಜ್ಯಾಧ್ಯಕ್ಷ), ಕುಪ್ಪೆ ನಾಗರಾಜ(ಕಾರ್ಯಾಧ್ಯಕ್ಷ), ಸಣ್ಣ ಮಾರೆಪ್ಪ, ಸಿದ್ದಣ್ಣ ಕಾಳೆ, ರಾಮಯ್ಯ ಶಿಳ್ಳೆಕ್ಯಾತಿ, ಚಾವಡಿ ಲೋಕೇಶ, ಅಯ್ಯಂ ಬಳಬಟ್ಟಿ, ಡಾ.ಕುಮುದಾ ಸುಶೀಲಪ್ಪ ಬಿ(ಉಪಾಧ್ಯಕ್ಷರು), ಡಾ.ಮಲ್ಲಿಕಾರ್ಜುನ ಮಾನ್ಪಡೆ(ಕಾರ್ಯದರ್ಶಿ), ಜಗದೀಶ ಗರಾಸಿಯಾ(ಕೋಶಾಧ್ಯಕ್ಷ), ವಾಸುದೇವ ಕಾಳೆ, ಹೆಚ್.ಪಿ.ಶಿಕಾರಿರಾಮು ಕಂಪ್ಲಿ(ಸಂಘಟನಾ ಕಾರ್ಯದರ್ಶಿ), ಸಿ.ಡಿ.ಗೀರೀಶ್, ಶಿಕಾರಿ ಬಾಬು, ಎಸ್.ಎಂ.ವಿರೇಶ ಸಿಂಧೋಳ್, ಭರತ್, ಬಾಬು ಗರಾಸಿಯಾ, ಸಿ.ಡಿ.ಮಂಜುನಾಥ, ಸಿ.ಡಿ.ರಂಗಪ್ಪ ಕುರುಗೋಡು(ಸದಸ್ಯರು), ಸಿ.ಡಿ.ರಾಜಶೇಖರ(ಬಳ್ಳಾರಿ ಜಿಲ್ಲಾಧ್ಯಕ್ಷ), ಹಾಗೂ ಡಿ.ಜಂಭಣ್ಣ(ಗುಡಾರ ಗುಡಿಸಲು ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ), ಜಿ.ಮಾಧವರಾವ್(ಗೌರವಾಧ್ಯಕ್ಷ) ಇವರು ಸರ್ವಾನುಮತದಿಂದ ನೇಮಕಗೊಂಡರು. ನಂತರ ರಾಜ್ಯಾಧ್ಯಕ್ಷ ಡಾ.ಕೆ.ಎಂ.ಮೈತ್ರಿ ಮಾತನಾಡಿ, ಅಲೆಮಾರಿಗಳು ಇತ್ತೀಚಿನ ದಿನಮಾನದಲ್ಲಿ ಸರ್ಕಾರದ ಸೌಲಭ್ಯಗಳೊಂದಿಗೆ ಬದಲಾವಣೆಯಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಅಲೆಮಾರಿ ಕುಟುಂಬಗಳು ಸಂಪೂರ್ಣವಾಗಿ ಹಿಂದುಳಿದ್ದು, ವಿಶೇಷ ಯೋಜನೆಗಳ ಮೂಲಕ ಸಮುದಾಯದ ಅಭಿವೃದ್ಧಿಗೆ ಆಧ್ಯತೆ ನೀಡಬೇಕು. ತಾಲೂಕು, ಜಿಲ್ಲಾ ಮಟ್ಟದಲ್ಲಿ ಅಲೆಮಾರಿ ಸಮುದಾಯ ಆಗಬೇಕಾಗಿದೆ. ಈಗಾಗಲೇ ರಾಜ್ಯದ 127 ಕಡೆಗಳಲ್ಲಿ ಗ್ರಂಥಾಲಯಗಳಿದ್ದು, ಇದರಿಂದ ಜ್ಞಾನ ಸಂಪಾದನೆಯಾಗುತ್ತಿದೆ ಎಂದರು. ತದನಂತರ ನೂತನ ಪದಾಧಿಕಾರಿಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಿಂಧೋಳ್ ಸಮಾಜದ ರಾಜ್ಯಾಧ್ಯಕ್ಷ ರಾಹುಲ್ ನಾಗಪ್ಪ, ಹಕ್ಕಿಪಿಕ್ಕಿ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಜಾನಕಿ ಹಾಗೂ ಮೀನಾಕ್ಷಿ ಸೇರಿದಂತೆ ಕರ್ನಾಟಕ ರಾಜ್ಯ ಅಲೆಮಾರಿ ಸಮುದಾಯದ ಮುಖಂಡರು ಇದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 