ಡಾ ಬಿ. ಆರ್. ಅಂಬೇಡ್ಕರವರ ಜಯಂತಿ ಆಚರಣೆ
Dr. B. R. Ambedkar Jayanti Celebration
ಲೋಕದರ್ಶನ ವರದಿ
ಕೊಪ್ಪಳ 15: ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿ ವತಿಯಿಂದ ಡಾ ಬಿ. ಆರ್. ಅಂಬೇಡ್ಕರವರ ಜಯಂತಿ ಆಚರಣೆ ಮಾಡಲಾಯಿತು.
ಕಂಪ್ಲಿಯ ಹಿರಿಯ ಬಸವಚೇತನ ಮತ್ತು ಮಹಾದಾಸೋಹಿ ಕೆ. ಎಂ. ಹೇಮಯ್ಯಸ್ವಾಮಿಯವರು ಮತ್ತು ಗಣ್ಯರು ಅಂಬೇಡಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ. ಎಸ್. ಪಾಟೀಲರವರು "ಸಂವಿಧಾನ ಕಾಯಿದೆಗಳು ಹಾಗೂ ನಿಯಮಗಳಲ್ಲಿ ಬಸವತತ್ವಗಳ ಪ್ರಭಾವ" ಕುರಿತಾಗಿ ಮಾತನಾಡಿದರು.
ಕೊಪ್ಪಳ ಗವಿಸಿದ್ಧೇಶ್ವರ ಕಾಲೇಜಿನ ಪ್ರಾಧ್ಯಾಪಕರಾದ ಶರಣಬಸಪ್ಪ ಬಿಳಿಯಲೆಯವರು ಅಂಬೇಡ್ಕರ್ ಜೀವನ ಮೌಲ್ಯಗಳು ಮತ್ತು ಸಾಧನೆಗಳು" ಕುರಿತು ಮಾತನಾಡಿದರು.
ಬಸವಕಲ್ಯಾಣದ ಯೋಗಗುರು ಲೋಕೇಶ ಗುರೂಜಿ, ಶರಣತತ್ವ ಚಿಂತಕ ಅಮರೇಶಪ್ಪ ಬಳ್ಳಾರಿ, ಬಸವತತ್ವ ಅನುಯಾಯಿ ಗಾಳೆಪ್ಪ ಕಡೆಮನಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಪ್ರವಚನ ಯಥಾರೀತಿ ಮುಂದುವರೆಯಿತು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 