ರಾಯಬಾಗ, 16 : ತಾಲೂಕಿನ ಇಟ್ನಾಳ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರಾಮಸ್ಥರಿಗೆ ಮತ್ತು ಸಂಘದ ಸದಸ್ಯರಿಗೆ ಸಸಿಗಳನ್ನು ವಿತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕಾ ಯೋಜನಾಧಿಕಾರಿ ಮಹೇಶ್ವರ್ಪ, ಗ್ರಾ.ಪಂ. ಸದಸ್ಯ ವಿವೇಕ ಮಾರಾಪುರ, ಸಿದಪ್ಪ ಸುನದೋಳಿ, ಲಕ್ಷ್ಮೀದೇವಿ ದೇವಸ್ಥಾನದ ಪೂಜೇರಿ ಮಾರುತಿ ಪೂಜಾರಿ ಹಾಗೂ ವಲಯ ಮೇಲ್ವಿಚಾರಕ ಗಣೇಶ್, ಕೃಷಿ ಮೇಲ್ವಿಚಾರಕ ಗೋಪಾಲ.ಕೆ ಮತ್ತು ಸೇವಾ ಪ್ರತಿನಿಧಿಗಳಾದ ಮಹಾನಂದಾ, ಲಕ್ಷ್ಮಿ, ಗೌರವ್ವ ಹಾಗೂ ಸಂಘದ ಸದಸ್ಯರು, ಗ್ರಾಮಸ್ಥರು ಇದ್ದರು.