ಕ್ರಿಕೆಟ್ ಟೋರ್ನಾಮೆಂಟ್‌: ವಿಧಿಕಾ ವಿವನ್ನಾ ವಾರಿಯರ ಪ್ರಥಮ

ಸಂಕೇಶ್ವರ 11: ಸ್ಥಳೀಯ ಗೋಂಧಳಿ ಸಮಾಜದ ಗೋಂಧಳಿ ಪ್ರಿಮಿಯರ್ ಲೀಗ್ ಇವರು ಇತ್ತೀಚಿಗೆ ಕ್ರಿಕೆಟ್ ಟೋರ್ನಾಮೆಂಟ ಕ್ರೀಡೆಯನ್ನು ಅಂಬಿಕಾ ನಗರದಲ್ಲಿ ಹಮ್ಮಿಕೊಂಡಿದ್ದರು. ಇದರಲ್ಲಿ 5 ಕ್ರಿಕೆಟ್ ತಂಡಗಳು ಭಾಗವಹಿಸಿದ್ದವು. ಇದು ಸಂಕೇಶ್ವರ ವ್ಯಾಪ್ತಿಯಲ್ಲಿ ಇರುವ ಕ್ರಿಡಾಪಟುಗಳು ಭಾಗವಹಿಸಿದ್ದರು. 

ಪ್ರಥಮ ಸ್ಥಾನವನ್ನು ವಿಧಿಕಾ ವಿವನ್ನಾ ವಾರಿಯರನ, ರೂ. 7777 ನಗದು ರೂಪದಲ್ಲಿ ಮತ್ತು ಟ್ರೋಫಿ, ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನು ಸಾಯಿ ಚಾಲೆಂಜರ್ಸ ತಂಡದವರು ರೂ. 5555 ನಗದು ಮತ್ತು ಟ್ರೋಫಿ ಪಡೆದುಕೊಂಡಿದ್ದಾರೆ.  

ಕಳೆದ 4 ವರ್ಷಗಳಿಂದ ಈ ಕಾರ್ಯಕ್ರಮವು ಜರುಗುತ್ತಿರುವುದು. ಬೆಸ್ಟ ಬಾಲರ್ ಕುನಾಲ್ ದವಡತೆ ರೂ. 1500 ನಗದು ಮತ್ತು ಟ್ರೋಫಿ, ಬೆಸ್ಟ ಬ್ಯಾಟ್ಸಮನ್ ವಿನಾಯಕ ದವಡತೆ, ರೂ. 1500 ನಗದು ಮತ್ತು ಟ್ರೋಫಿ, ಮ್ಯಾನ ಆಫ್ ದಿ ಮ್ಯಾಚ ಸಾಗರ ದವಡತೆ ರೂ. 1500 ನಗದು ಮತ್ತು ಟ್ರೋಫಿ ಪಡೆದುಕೊಂಡರು. 

ಜಿಲ್ಲಾ ಗೊಂಧಳಿ ಸಮಾಜದ ಮುಖಂಡ ಸಂದೀಪ ಗೊಂಧಳಿಯವರು ಲೋಕದರ್ಶನ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ, ಯುವಕರು ಭಾಗವಹಿಸಿ ದುಶ್ಚಟಗಳಿಂದ ದೂರವಿರಲು ಪ್ರಯತ್ನಿಸುವ ಸಲುವಾಗಿ ಇಂಥ ಕ್ರೀಡೆಗಳನ್ನು ಆಯೋಜಿಸಲಾಗಿದ್ದು. ಯುವಕರು ಕ್ರೀಡೆಗಳಲ್ಲಿ ಭಾಗವಹಿಸಿ ಆರೋಗ್ಯವನ್ನು ಕಾಪಾಡಿಕೊಂಡು ತಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬೇಕೆಂದು ಕಿವಿಮಾತು ಹೇಳಿದರು.  

ಕ್ರೀಡೆಯಲ್ಲಿ ಹಂಪಾಯರ ಆಗಿ ಸನಿ ಪಾಟೀಲ, ಮತ್ತು ಅನಿಲ ಸೊಂಟಕ್ಕಿ, ಕೃಷ್ಣಾ ದವಡತೆ ರಾಮಚಂದ್ರ ಭೋಸಲೆ, ನೇತಾಜಿ ಭೋಸಲೆ, ಡಾ. ಸಂಜು ಸುಗತೆ, ದತ್ತಾ ದವಡತೆ, ಶಂಕರ ಕಾಳೆ ಮುಂತಾದ ಗಣ್ಯ ವ್ಯಕ್ತಿಗಳು ಕ್ರೀಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.