ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ: ಬಸವಣ್ಣನವರು
Couples' reconciliation in court
ಸಿಂದಗಿ 29; ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವ ರೀತಿಯಲ್ಲಿ 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಮದುವೆಯನ್ನುವುದು ಎರಡು ಜೀವಗಳು ಅನ್ಯೂನ್ಯವಾದ ಬಾಂಧವ್ಯಗಳನ್ನು ಹೊಂದಿ ಸಮಾಜಕ್ಕೆ ದಾರೀದೀಪವಾಗಿ ಜೀವಿಸುವುದು ಎನ್ನುವ ಕಲ್ಪನೆಯಲ್ಲಿ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಬೇಕು ಅದನ್ನು ಅರ್ಧಕ್ಕೆ ನಿಲ್ಲಿಸುವುದು ತಪ್ಪು ಅದಕ್ಕೆ ರಾಜಿ ಸಂದಾನ ಮಾಡುವ ಮೂಲಕ ಸತಿಪತಿಗಳನ್ನು ಒಂದು ಮಾಡಿದ ತೃಪ್ತಿ ನಮ್ಮಲ್ಲಿದೆ ಎಂದು ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾದೀಶರಾದ ಎ.ಆರ್.ಎ ಮುಲ್ಲಾ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ ಸಿಂದಗಿ ವತಿಯಿಂದ ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯದಲ್ಲಿ ವೈವಾಹಿಕ ಪ್ರಕರಣ ಸಂಖ್ಯೆ:.43/2025ಸದರಿ ಪ್ರಕರಣದಲ್ಲಿ ನ್ಯಾಯಾದೀಶರಾದ ಎ ಆರ್ ಎ ಮುಲ್ಲಾ ಗೌರವಾನ್ವಿತ ನ್ಯಾಯಾಧೀಶರವರ ನ್ಯಾಯಾಲಯದಲ್ಲಿ ದಂಪತಿಗಳನ್ನು ರಾಜೀಸಂಧಾನದ ಮೂಲಕ ಗೌರವಾನ್ವಿತ ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾದೀಶರ ಸಮ್ಮುಖದಲ್ಲಿ ಪುಪ್ಪ ಮಾಲೆಯನ್ನು ಬದಲಾವಣೆ ಮಾಡುವ ಮೂಲಕ ಸತಿ ಪತಿಗಳನ್ನು ಒಂದುಗೂಡಿಸಿಲಾಯಿತು.
ಸದರಿ ಪ್ರಕರಣದ ನ್ಯಾಯಾಂಗ ಸಂಧಾನಕಾರರಾಗಿ ಎ.ಕೆ.ಕನ್ನೂರು ವಕೀಲರು ಹಾಗೂ ಅರ್ಜಿದಾರರ ಪರ ವಕೀಲರು ಆರ್.ಐ.ಮೋಗಲಾಯಿ ಮತ್ತು ಎದುರುದಾರ ಪರ ವಕೀಲರಾದ ಎನ್.ಎಸ್.ಮನಗೂಳಿ ಮತ್ತು ಜಿ.ಸಿ.ಭಾವಿಕಟ್ಟಿ, ಐ.ಎಸ್.ಹೀರೆಮಠ, ಜಿ.ವೈ.ಬಾಣಿ, ವಕೀಲರು ಇತರ ವಕೀಲರು ಹಾಜರು ಇದ್ದರು, ಮತ್ತು ನ್ಯಾಯಾಲಯದ ಸಿಬ್ಬಂದ್ದಿಯಾದ ಎ.ಎಲ್.ಮುಲ್ಲಾ ಪ್ರಥಮ ದರ್ಜೆ ಸಹಾಯಕರು ಮತ್ತು ಬೆರಳಚ್ಚುಗಾರ ಬಸವರಾಜ ಮೊಕಾಶಿ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯಿ ಸಿಬ್ಬಂದ್ದಿ ಶ್ರೀಕಾಂತ ಕಟ್ಟಮನಿ ಉಪಸ್ಥೀತರಿದ್ದರು
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 