ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ: ಓರ್ವನ ಮೇಲೆ ಮಾರಣಾಂತಿಕ ಹಲ್ಲೆ

ಯರಗಟ್ಟಿ 07 : ಭಂಡಾರ ಗ್ರಾಮದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದ್ದು, ಓರ್ವ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. 

ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಭಂಡಾರಹಳ್ಳಿ ಗ್ರಾಮದ ಬೂತ್ ನಂಬರ್ 88ರಲ್ಲಿ ಗಲಾಟೆ ನಡೆದಿದೆ.  

ಕಾಂಗ್ರೆಸ್ ಬೂತ್ ಏಜೆಂಟ್ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. 

ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಭಂಡಾರಹಳ್ಳಿಯ ಹಣಮಂತಪ್ಪಾ ಭೀಮಪ್ಪಾ ಅರಭಾಂವಿ (ವಯಸ್ಸು 48 ವರ್ಷ) ದೂರು ದಾಖಲಿಸಿದ್ದಾರೆ. 

ವಿಠ್ಠಲ ಅರ್ಜುನ ನಿಕ್ಕಂ, ಬುಜಂಗ ಕೃಷ್ಣಾಜಿರಾವ್ ನಿಕ್ಕಂ, ಸುನೀಲ ಮಾರುತಿರಾವ್ ನಿಕ್ಕಂ, ಪುಂಡಲೀಕ ಮಾರುತಿರಾವ್ ನಿಕ್ಕಂ ಹಾಗೂ ನಾಗಪ್ಪಾ ಮಹಾದೇವಪ್ಪಾ ಬನ್ನೂರು ಎನ್ನುವವರ ಮೇಲೆ ದೂರು ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಸಿದ ಸವದತ್ತಿ ಸಿಪಿಐ ಸುರೇಶ ಬಂಡೆಗುಬಳ ಪ್ರಕರಣ ದಾಖಲಿಸಿಕೊಂಡಿದ್ದಾರೆ.