ಬೂತ್ ಅಧ್ಯಕ್ಷರ ಕಾರ್ಯಕರ್ತರ ಸಭೆ

ಮಹಾಲಿಂಗಪುರ 17; ಜಾತಿ ಮತ್ತು ಹಣ ನೋಡಿ ಉಗ್ರಗಾಮಿಗಳಿಗೆ ಮತ ನೀಡಬೇಡಿ, ದೇಶವನ್ನು ಶ್ರೀಮಂತಗೊಳಿಸಿದ ಮೋದೀಜಿಯವರ ಗೆಲುವಿಗಾಗಿ ಮತ ಹಾಕಿ ಸರಳ ಸಜ್ಜನಿಕೆಯ ಗದ್ದಿಗೌಡರನ್ನು ಗೆಲ್ಲಿಸಿ ಎಂದು ಶಾಸಕ ಸಿದ್ದು ಸವದಿ ಹೇಳಿದರು. 

ಸ್ಥಳೀಯ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಸಂಜೆ ಜರುಗಿದ ಮಹಾಲಿಂಗಪುರ ಮತ್ತು ಸೈದಾಪುರ ಜಿಪಂ ಶಕ್ತಿ ಕೇಂದ್ರಗಳ ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಚುನಾವಣೆ ಧರ್ಮ-ಅಧರ್ಮಗಳ ನಡುವಿನ ಚುನಾವಣೆ, ನಮ್ಮ ಸಾವು-ಬದುಕಿನ ಚುನಾವಣೆ, ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಭವಿಷ್ಯದ ಚುನಾವಣೆ, ದೇಶದ ಅಳಿವು ಉಳಿವಿನ ಚುನಾವಣೆ. ನಮ್ಮ ಮಂದಿರಗಳು ಜಾತ್ರೆಗಳು ಹಾಗೂ ನಮ್ಮ ಮನೆಯ ಹೆಣ್ಣುಮಕ್ಕಳ ಮಾನ, ಪ್ರಾಣ ಉಳಿವಿಗಾಗಿ 15 ವರ್ಷ ಸಿಎಂ, 10 ವುರ್ಷ ಪ್ರಧಾನಿಯಾಗಿದ್ದರೂ 1 ರೂ. ಸ್ವಂತ ಆಸ್ತಿ ಮಾಡದ ದೇವತಾಪುರುಷ, ಅಭಿವೃದ್ಧಿಯ ಹರಿಕಾರ ಮೋದೀಜಿ ಮತ್ತೊಮ್ಮೆ ಪ್ರಧಾನಿ ಆಗಲೇಬೇಕು, ದೇಶದ ಹಿತಕ್ಕಾಗಿ ಇನ್ನುಳಿದ ಕೇವಲ 22 ದಿನಗಳಲ್ಲಿ ಸೈನಿಕರಂತೆ ಕೆಲಸ ಮಾಡಿ ಪ್ರತಿ ಬೂತ್ ಗೆಲ್ಲಿಸಿ, ಬೂತ್ ಗೆದ್ದರೆ ದೇಶ ಗೆಲ್ಲುತ್ತದೆ ಎಂದರು.  

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಮುಖಂಡರಾದ ಮನೋಹರ ಶಿರೋಳ, ಜಿ.ಎಸ್‌.ಗೊಂಬಿ,ಸುರೇಶ ಮಡಿವಾಳರ  ಮಾತನಾಡಿ, ವಿಸಿತ ಮತ್ತು ಸುಸ್ಥಿರ ಭಾರತಕ್ಕಾಗಿ ಮೋದೀಜಿ 3 ನೇ ಬಾರಿ ಪ್ರಧಾನಿಯಾಗಲು ಹಿಂದಿನ ಲೀಡ್ ಮೀರಿಸಲು ಪ್ರಯತ್ನಿಸಬೇಕಿದೆ ಎಂದರು. 

ಬೂತ್ ಅಧ್ಯಕ್ಷರಿಗೆ ಮತ್ತು ಕಾರ್ಯಕರ್ತರಿಗೆ ಜವಾಬ್ದಾರಿ ಹಂಚಲಾಯಿತು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಹಾಲಿಂಗಪ್ಪ ಕುಳ್ಳೊಳ್ಳಿ, ಆನಂದ ಕಂಪು, ಶೇಖರ ಅಂಗಡಿ, ಚನ್ನಪ್ಪ ಪಟ್ಟಣಶೆಟ್ಟಿ, ಮಹಾಲಿಂಗಪ್ಪ ಸನದಿ, ಬಸವಣ್ಯೆಪ್ಪ ಬ್ಯಾಳಿ, ಪರ​‍್ಪ ಹುದ್ದಾರ, ಪರ​‍್ಪ ಸತ್ತಿಗೇರಿ, ಪ್ರಕಾಶ ಚನ್ನಾಳ, ಭೀಮಶೀ ಉಳ್ಳಾಗಡ್ಡಿ, ಮಲ್ಲಪ್ಪ ಬಾಯಪ್ಪಗೋಳ, ಶಂಕ್ರೆಪ್ಪ ಹನಗಂಡಿ, ಬೆಳಗಾಂಕರ್, ಮಹಿಳಾ ಘಟಕದ ಅಧ್ಯಕ್ಷೆ ಸುವರ್ಣಾ ಆಸಂಗಿ ಇತರರಿದ್ದರು. 

ಗುರುಪಾದ ಅಂಬಿ ನಿರೂಪಿಸಿದರು.