ವಿಜೃಂಭನೆಯಿಂದ ಬೊಮ್ಮನಾಳ ದೇವರುಗಳ ಜಾತ್ರೆ

ರಾಯಬಾಗ 27: ತಾಲೂಕಿನ ಬೊಮ್ಮನಾಳ ಗ್ರಾಮದ ಭೈರೇಶ್ವರ, ಹನುಮಾನ ಹಾಗೂ ಮಲ್ಲಿಕಾರ್ಜುನ ದೇವರುಗಳ ಜಾತ್ರಾ ಮಹೋತ್ಸವವು ವಿಜೃಂಭನೆಯಿಂದ ಜರುಗಿತು. ಶನಿವಾರ ಜಾತ್ರಾ ನಿಮಿತ್ಯ ಹಮ್ಮಿಕೊಂಡಿದ್ದ ವಿವಿಧ ಶರ್ಯತ್ತುಗಳು ಜರುಗಿದವು. 

ವಿವಿಧ ಶರ್ಯತ್ತಿನಲ್ಲಿ ವಿಜೇತರಾದವರು: ಕುದುರೆ ಗಾಡಿ ಶರ್ಯತ್ತಿನಲ್ಲಿ ಪರಮಾನಂದ ಬೆಳವಿ ಪ್ರಥಮ, ಉಮೇಶ ಕುಡಚೆ ದ್ವಿತೀಯ, ಸಂತೋಷ ಗಾಯವಾಡ ತೃತೀಯ ಹಾಗೂ ಬಿಕಾಜಿ ಮಾಳಿ ನಾಲ್ಕನೇ ಬಹುಮಾನ ಪಡೆದುಕೊಂಡರು.  

ಸೈಕಲ್ ಶರ್ಯತ್ತಿನಲ್ಲಿ ಬಸು ಧರ್ಮಟ್ಟಿ ಪ್ರಥಮ, ಕರಣ ಲಂಬಾನಿ ದ್ವಿತೀಯ ಹಾಗೂ ಕರೆಪ್ಪ ಕುಕ್ಕಡಿ ತೃತೀಯ ಬಹುಮಾನ ಪಡೆದರು. ಕುದುರೆ ಶರ್ಯತ್ತಿನಲ್ಲಿ ಚಿಂಚಲಿಯ ಪೈಲ್ವಾನ ಪ್ರಥಮ, ರಾಯಬಾಗದ ಅಕ್ಷಯ ದ್ವಿತೀಯ ಹಾಗೂ ಬೊಮ್ಮನಾಳದ ಜ್ಯೋತಿಬಾ ಮಾನೆ ತೃತೀಯ ಬಹುಮಾನ ಪಡೆದರು.  ಓಡುವ ಶರ್ಯತ್ತಿನಲ್ಲಿ ಅಥಣಿ ತಾಲೂಕಿನ ಬಡಚಿಯ ಶಿವಾನಂದ ನಾಯಿಕ ಪ್ರಥಮ, ರಾಯಬಾಗದ ಅಜೀತ ಪಾಟೀಲ ದ್ವಿತೀಯ ಹಾಗೂ ರಾಯಬಾಗದ ಶಾಹೀದ ತೃತೀಯ ಬಹುಮಾನ ಪಡೆದರು.  

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸತ್ಯಗೌಡ ಪಾಟೀಲ, ರಮೇಶ ಪಾಟೀಲ, ಸತೀಶ ಬಾಗಿ, ಶಿವಾನಂದ ಪಾಟೀಲ, ಅರುಣ ಗಾಡಿವಡ್ಡರ, ಈಶ್ವರ ಪಾಟೀಲ, ಭೈರಗೌಡ ಪಾಟೀಲ, ಈಶ್ವರ ರಬಕವಿ, ಕೆ.ಎನ್‌.ಪಾಟೀಲ ಸೇರಿ ಜಾತ್ರಾ ಕಮೀಟಿ ಸದಸ್ಯರು ಇದ್ದರು.