ಬಳ್ಳಾರಿ: ಉಚಿತ ಮಕ್ಕಳ ತಪಾಸಣಾ ಶಿಬಿರ
ಲೋಕದರ್ಶನ ವರದಿ
ಬಳ್ಳಾರಿ 23: ನಗರದ ಕಪ್ಪಗಲ್ ರಸ್ತೆಯಲ್ಲಿರುವ ಕಿತ್ತೂರು ರಾಣಿಚೆನ್ನಮ್ಮ ಆವರಣದಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ರೈನ್ಬೋ ಮಕ್ಕಳ ಆಸ್ಪತ್ರೆ ಮಾರತ್ಹಳ್ಳಿ ಬೆಂಗಳೂರು ಅವರು ಇಂಡಿಯನ್ ಮೆಡಿಕಲ್ ಆಸೋಷಿಯನ್ ಸಹಯೋಗದೊಂದಿಗೆ ಬೆಳಗ್ಗೆ 9 ರಿಂದ ಮದ್ಯಾಹ್ನ 03 ಗಂಟೆಯವರಗೆ ಇದೇ ಮೊದಲ ಬಾರಿಗೆ 360ಕ್ಕೂ ಹೆಚ್ಚು ಮಕ್ಕಳ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದರು.
ಈ ಮಕ್ಕಳಲ್ಲಿ ಉಂಟಾಗುವ ಪೀಡಿಯಾಟ್ರಿಕ್, ಹೆಮೆಟೊ ಅಂಕಾಲಜಿ, ಪೀಡಿಯಾಟ್ರಿಕ್, ನೆಪ್ರೋಲಾಜಿ, ಪೀಡಿಯಾಟ್ರಿಕ್ ಆರಥೋಪೆಡಿಕ್ಸ್, ಯೂರೋಲಾಜಿ, ಇ ಎನ್ ಟಿ, ನವಜಾತ ಮತ್ತು ಮಕ್ಕಳ ಶಸ್ತ್ರ ಚಿಕಿತ್ಸೆ ಸೇರಿದಂತೆ ಹಲವಾರು ರೋಗಗಳಿಗೆ ವಿವಿಧ ಬಗೆಯ ವೈದ್ಯರ ತಂಡ ಬೆಂಗಳೂರು ಇವರು ತಪಾಸಣಾ ನಡೆಸಿದರು.
ಈ ಶಿಬಿರವನ್ನು ಐಎಂಎ ಕಾರ್ಯದರ್ಶಿ ಡಾ.ಭರತ್, ಸಹಕಾರ್ಯದರ್ಶಿ ಬಿ.ಕೆ.ಎಸ್.ಶ್ರೀಕಾಂತ್, ಸೇರಿದಂತೆ ಹಲವಾರು ಬಳ್ಳಾರಿಯ ನುರಿತ ವೈದ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಂಗಳೂರಿನ ವೈದ್ಯರುಗಳಾದ ಡಾ.ಕವಿತ ಭಟ್, ಡಾ.ಲೀಲಾ ಬಾಲಚಂದ್ರ, ಡಾ.ಮನುಚೌದರಿ, ಡಾ.ಅನಿಲ್ ಪಾಂಡು, ಡಾ.ಹಕ್ಷಿತ, ಸೇರಿಂದತೆ ರೈನ್ಬೋ ಮಕ್ಕಳ ಆಸ್ಪತ್ರೆಯ ತಂಡವು ಸಂಪೂರ್ಣವಾಗಿ ಮಕ್ಕಳಲ್ಲಿರುವ ಕಾಯಿಲೆಗಳನ್ನು ಪರಿಕ್ಷಿಸಿ ಅದರಲ್ಲಿ ತುರ್ತು ಪರಿಸ್ಥಿತಿಯಲ್ಲಿರು ಮಕ್ಕಳನ್ನು ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಪರಿಕ್ಷಿಸಿ ಅದರಲ್ಲಿ ತುರ್ತು ಪರಿಸ್ಥಿತಿಯಲ್ಲಿರು 12 ಮಕ್ಕಳನ್ನು ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಯನ್ನು ನೀಡಲಾಗುವುದು ಎಂದು ವೈದ್ಯರು ನಮ್ಮ ಪ್ರತಿನಿಧಿಗೆ ವಿವರಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 