ಮಹಿಳಾ ಸ್ವಸಹಾಯ ಸಂಘ(ರಿ) ವತಿಯಿಂದ ವಿಶ್ವ ಪರಿಸರ ದಿನಾಚಾರಣೆ ಕಾರ್ಯಕ್ರಮ
ಹಾವೇರಿ 06 :ಉತ್ತಮ ಪರಿಸರಕ್ಕಾಗಿ ಸಂಘದ ಪ್ರತಿಯೊಬ್ಬರು ಮನೆಗೊಂದು ಮರ ಎಂಬಂತೆ ಸಸಿ ನೆಡೋಣ ಎಂದು ಛತ್ರಪತಿ ಶಿವಾಜಿ ಮಹಿಳಾ ಸ್ವ-ಸಹಾಯ ಸಂಘ(ರಿ)ದ ಅಧ್ಯಕ್ಷರಾದ ಶಶಿರೇಖಾ ರಮೇಶ ಮುಂಜೋಜಿ ಹೇಳಿದರು.
ಇಲ್ಲಿನ ಮಂಜುನಾಥ ನಗರದಲ್ಲಿನ ಸಂಘದ ಸದಸ್ಯರಾದ ಶ್ರೀಮತಿ ಸಂಜನಾ ಮೋರೆ ಅವರ ಮನೆಯಲ್ಲಿ ಛತ್ರಪತಿ ಶಿವಾಜಿ ಮಹಿಳಾ ಸ್ವಸಹಾಯ ಸಂಘ(ರಿ)ಹಾವೇರಿ ವತಿಯಿಂದ ಆಯೋಜಿಸಿದ ವಿಶ್ವ ಪರಿಸರ ದಿನಾಚಾರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ವಾತಾವರಣದಲ್ಲಿ ತಾಪಮಾನ ಏರುಪೇರು ಆಗುತ್ತಿರುವ ಸನ್ನಿವೇಶ ನಾವೆಲ್ಲರೂ ನೋಡುತ್ತಿದ್ದೇವೆ.ಪರಿಸರ ಸಮತೋಲನ ಕಾಪಾಡುವ ಕೆಲಸ ಮಾಡಬೇಕಿದೆ.ಅದಕ್ಕಾಗಿ ವಿವಿಧ ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಜೂನ್ ತಿಂಗಳ ವಿಶ್ವ ಪರಿಸರ ದಿನ ಆಚರಣೆ ಮಾಡುತ್ತಿದ್ದು,ನಮ್ಮ ಸಂಘದ ಪ್ರತಿಯೊಬ್ಬರು ಪರಿಸರ ಕಾಳಜಿಗಾಗಿ ಮನೆಗೊಂದು ಮರ ಬೆಳೆಸುವ ಪ್ರಯತ್ನ ಮಾಡುವ ಸಂಕಲ್ಪ ಮಾಡಿದ್ದೇವೆ.ಸಂಘದಿಂದ ಪರಿಸರ ಸಂರಕ್ಷಣೆ ಮಾಡಲು ಎಲ್ಲರ ಸಹಕಾರ ನೀಡೋಣ ಎಂದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿಗಳಾದ ಅಶ್ವಿನಿ ಬೋಸ್ಲೆ, ಗಾಯತ್ರಿ ಜಾಧವ, ಅನಿತಾ ಜಾಧವ, ಸುಧಾಬಾಯಿ ತಿಳವಳ್ಳಿ, ಯಲ್ಲಮ್ಮ ತಿಳವಳ್ಳಿ,ಶ್ರೀಮತಿ ರೇಣುಕಾ ಸಾವಂತ, ಸುಧಾ ಕಲಾಟೆ ಸುನಿತಾ ಮೋರೆ,ಶ್ರೀಮತಿ ಸಂಜನಾ ಮೋರೆ, ಕೀರ್ತಿ ತಿಳವಳ್ಳಿ, ಸುಮಿತ್ರಾ ಬೋಸ್ಲೆ ಹಾಗೂ ಶ್ರೀಮತಿ ಗೀತಾಬಾಯಿ ಜೋಡಿಗೆ ಇದ್ದರು.