20ರಂದು ರಾಜ್ಯ ಮಟ್ಟದ ಮ್ಯಾರಥಾನ್
ಲೋಕದರ್ಶನ ವರದಿ
ಕೊಪ್ಪಳ 17: ನಗರದಲ್ಲಿ ಇತಿಹಾಸ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆಯ ಪ್ರಯುಕ್ತ ರಾಜ್ಯ ಮಟ್ಟದ ಮ್ಯಾರಥಾನ್-2019, ಪ್ರತಿ ವರ್ಷದಂತೆ ಈ ವರ್ಷವು ಕೊಪ್ಪಳ ಅಥ್ಲೇಟಿಕ್ಸ್ ಅಸೋಸಿಯೇಷನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ದಿ. 20 ಜನೆವರಿ 2019ರಂದು ಅಯೋಜಿಸಲಾಗಿದೆ. ಮ್ಯಾರಥಾನ್ ಓಟವು ಮಹಿಳಾ ಮತ್ತು ಪುರುಷಗಾಗಿ ಅಯೋಜನೆ ಮಾಡಲಾಗಿದ್ದು ಪುರುಷರ ಮ್ಯಾರಥಾನ್ ಓಟಕ್ಕೆ ಸಂಸದರಾದ ಕರಡಿ ಸಂಗಣ್ಣ ಹಾಗೂ ಜಿಲ್ಲಾಧಿಕಾರಿ ಪಿ.ಸುನಿಲ್ಕುಮಾರ್ ಚಾಲಾನೆ ನೀಡುವರು. ಮಹಿಳಾ ಮ್ಯಾರಥಾನ್ ಓಟಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ಚಾಲಾನೆ ನೀಡುವರು.
ಪುರುಷರ ಓಟ ಹೊಸಪೇಟೆ ರಸ್ತೆ ಹಾಲವತರ್ಿ ಕ್ರಾಸ್ ನಿಂದ ಪ್ರಾರಂಭಗೊಂಡು ಮಳೆಮಲ್ಲೇಶ್ವರ ಕ್ರಾಸ್ಗೆ ಕೊನೆ ಗೊಳ್ಳುತ್ತದೆ. ಮಹಿಳೆಯರ ಮ್ಯಾರಥಾನ್ ಓಟವು ಹೊಸಪೇಟೆ ರಸ್ತೆ ಹಾಲವತರ್ಿ ಕ್ರಾಸ್ ನಿಂದ ಪ್ರಾರಂಭಗೊಂಡು ಗೌರಿಶಂಕರ ದೇವಸ್ಥಾನದ ಹತ್ತಿರ ಕೊನೆಗೋಳ್ಳುತ್ತದೆ. ಓಟದ ಮಧ್ಯೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಹಾಗೂ ದಿ.23, 24, ಜನೆವರಿ 2019ರಂದು ಪುರುಷರಿಗಾಗಿ ಮುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಗಳು ಗವಿಸಿದ್ದೇಶ್ವರ ಮಹಾವಿದ್ಯಾಲಯ ಮೈದಾನದಲ್ಲಿ ಅಯೋಜಿಸಲಾಗಿದೆ ಎಂದು ಅಯೋಜಕರಾದ ಶ್ರೀನಿವಾಸ ಗುಪ್ತ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಶರರಣಬಸವ ಬಂಡಿಹಾಳ್, ಬಸವರಾಜ್, ವಿಠಲ್, ಬಸವರಾಜ್ ಹೋಸಮನಿ ಇನ್ನು ಮುಂತಾದವರು ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 