ಕಲಾಪ ಬಹಿಷ್ಕರಿಸಿ ರೈತ ಹೋರಾಟಕ್ಕೆ ನ್ಯಾಯವಾದಿಗಳ ಬೆಂಬಲ
Lawyers support farmers' struggle by boycotting proceedings
ಇಂಡಿ 05: ತಾಲ್ಲೂಕಿನ ಹೃದಯ ಭಾಗದಲ್ಲಿರುವ ಶ್ರೀ ಬಸವೇಶ್ವರ ವೃತ್ತದ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಹಸಿರು ಸೇನೆ ವತಿಯಿಂದ ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಆಗುವರಿಗೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 4ನೇ ದಿನಕ್ಕೆ ಕಾಲಿಟ್ಟಿದೆ.ಈ ಹೋರಾಟಕ್ಕೆ ಬೆಂಬಲ ಸೂಚಿಸಿದ ಇಂಡಿ ತಾಲೂಕು ನ್ಯಾಯವಾದಿ ಸಂಘದ ವತಿಯಿಂದ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಇಂಡಿ ಕೊರ್ಟ್ ಆವರಣದಿಂದ ರೈತ ಹೋರಾಟಕ್ಕೆ ಜಯವಾಗಲಿ ಎಂದು ಘೋಷಣೆ ಕೂಗೂತ್ತಾ ಶ್ರೀ ಬಸವೇಶ್ವರ ವೃತ್ತದ ಬಳಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಸಿದ್ದಣ್ಣ ಬೂದಿಹಾಳ ಅವರು ರೈತರು ಮಾಡುತ್ತಿರುವ ಹೋರಾಟ ನ್ಯಾಯಯುತವಾಗಿ ಈ ಹೋರಾಟಕ್ಕೆ ನಮ್ಮ ಇಂಡಿ ತಾಲ್ಲೂಕಿನ ಎಲ್ಲಾ ನ್ಯಾಯವಾದಿಗಳ ಸಂಪೂರ್ಣ ಬೆಂಬಲ ಇದೆ, ನೀವು ನಿಮಗೆ ನ್ಯಾಯ ಸಿಗುವರಿಗೆ ನಾವು ರೈತರ ಪರವಾಗಿ ಇರುತ್ತೆವೆ, ಈ ಹೋರಾಟದಲ್ಲಿ ರೈತರ ಮೇಲೆ ಏನಾದರೂ ಕೇಸ್ ದಾಖಲಾದರೆ ಆ ಕೇಸನ್ನು ಉಚಿತವಾಗಿ ಕೋರ್ಟ್ ನಲ್ಲಿ ವಾದ ಮಾಡಿ ರೈತರಿಗೆ ನ್ಯಾಯ ಕೊಡುಸುತ್ತೆವೆ ಎಂದು ಹೇಳಿದರು ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎಮ್ ಎಮ್ ಬಿರಾದಾರ ಎನ್ ಕೆ ನಾಡಪುರೋಹಿತ ಎಸ್ ಎಸ್ ರೇಬಿನಾಳ ಎಸ್ ಎಲ್ ನಿಂಬರಗಿಮಠ ಎ ಜೆ ಧನಶೇಟ್ಟಿ ಡಿ ಜಿ ಜೊತಗೊಂಡ ಎಸ್ ಆರ್ ಮುಜಗೊಂಡ ಬಿ ಬಿ ಬಿರಾದಾರ ಎಸ್ ಆರ್ ಬಿರಾದಾರ ವಾಯ್ ಎಸ್ ಪೂಜಾರಿ ಎಂ ಎಸ್ ಬೋಸಗಿ ಎಸ್ ಕೆ ರಾಠೋಡ ಎಮ್ ಎಸ್ ಪಾಟೀಲ ಜಿ ಎಸ್ ಪಾಟೀಲ ಪಿ ಬಿ ಪಾಟೀಲ ಎ ಎ ಗಜಾಕೋಶ ಜೆ ಬಿ ಬೇನೂರ ಟಿ ವಾಯ್ ಮೆಂಡೇಗಾರ ಎಂ ಜಿ ಗಾಯಕವಾಡ ಅನೀಲ ಜೋಶಿ ರಮೇಶ್ ಕೊಳಿ ವಿ ಎಸ್ ಚಲವಾದಿ ಎಸ್ ಕೆ ತಮ್ಮಶೇಟ್ಟಿ ಎಮ್ ಎಸ್ ತೇಲಿ ಎ ಎಸ್ ಕೊಟ್ಟಲಿಗಿ ಎಸ್ ಬಿ ಗಿಡಗಂಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 