ಯರಗಟ್ಟಿಯಲ್ಲಿ ಮುಂದುವರೆದ ರೈತರ ಪ್ರತಿಭಟನೆ
Farmers' protest continues in Yaragati
ಯರಗಟ್ಟಿ, 06 : ಪಟ್ಟಣದ ಸಂಗೋಳ್ಳಿ ರಾಯಣ್ಣವೃತ್ತದಲ್ಲಿ ಐದನೇ ದಿನವೂ ರೈತರ ಪ್ರತಿಭಟನೆ ಮುಂದುವರೆದಿದ್ದು, ರೈತರ ರಸ್ತೆ ತಡೆಯಿಂದ ದಿನವಿಡಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ರೈತರು ರಸ್ತೆ ಮೇಲೆಯೇ ಅಡುಗೆ ಮಾಡಿ ಊಟ ಮಾಡಿದರು.ಬೆಂಬಲ ಬೆಲೆ ಘೋಷಣೆ ಆಗುವವರೆಗೆ ಈ ಹೋರಾಟ ಮುಂದುವರೆಯುತ್ತದೆ ಎಂದು ರೈತ ಮುಖಂಡರು ಮಹಾಂತೇಶ ತೋಟಗಿ ತಿಳಿಸಿದ್ದು.ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸೋಮು ರೈನಾಪೂರ ಮಾತನಾಡಿದ ಶುಕ್ರವಾರ ಯರಗಟ್ಟಿ ಸಂಪೂರ್ಣ ಬಂದ್ ಇರುತ್ತದೆ ಮತ್ತು ಸರಕಾರ 24 ಗಂಟೆ ಒಳಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಪಂಚನಗೌಡ ದ್ಯಾಮನಗೌಡರ, ಕುಮಾರ ಹಿರೇಮಠ, ಡಾ. ವಿಶ್ವನಾಥ ತಾವಂಶಿ, ವಿರೇಶ ಸೋಬರದಮಠ, ಉದಯ ಕರ್ಜಗಿಮಠ, ಶಂಕರೆಪ್ಪ ವಜ್ರಮಟ್ಟಿ, ಕೃಷಿ ಸಮಾಜದ ರಾಜ್ಯಾಧ್ಯಕ್ಷ ಮಾಣಿಕ್ಯ ಚಿಲ್ಲೂರ, ನಿರ್ಮಾಲಾ ಹನಸಿ, ಗೂಳಪ್ಪ ಕುಂಬಾರ, ಬಾಳಪ್ಪ ತಡಸಿ, ಯಕ್ಕೇರೆಪ್ಪ ತಳವಾರ, ಬಸವರಾಜ ಬಿಜ್ಜೂರ, ಯಲ್ಲನಾಯ್ಕ ನಾಯ್ಕರ, ಸಂತೋಷ ದೇವರಡ್ಡಿ, ರಂಗಪ್ಪ ಗಂಗರಡ್ಡಿ, ಸೋಮು ರೈನಾಪೂರ, ರಾಮಕೃಷ್ಣ ಎಳ್ಳಮ್ಮಿ, ಲಕ್ಕಪ್ಪ ಬಿಜ್ಜನವರ, ಮಹಾದೇವ ಯಂಡ್ರಾವಿ, ಸಿಂಧೂರ ತೆಗ್ಗಿ, ಮುತ್ತು ವೀರಾಪೂರ, ಹಾಗೂ ಸವದತ್ತಿ, ಮುನವಳ್ಳಿ, ಮತ್ತು ಸುತ್ತಲಿನ ರೈತರು ಇದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 