ರೈತರ ಹಿತ, ಕಾರಖಾನೆ ಅಭಿವೃದ್ದಿ ನನ್ನ ಗುರಿ : ಅಧ್ಯಕ್ಷ ಪರ್ಪ ಸವದಿ
Farmers' interest, factory development is my goal: President Parpa Savadi
ರೈತರ ಹಿತ, ಕಾರಖಾನೆ ಅಭಿವೃದ್ದಿ ನನ್ನ ಗುರಿ : ಅಧ್ಯಕ್ಷ ಪರ್ಪ ಸವದಿ
ಅಥಣಿ 02: ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ರೈತ ಸದಸ್ಯರು, ಕಬ್ಬು ಬೆಳೆಗಾರರರ ಹಿತ ಕಾಪಾಡುವದರ ಜೊತೆ ಕಾರಖಾನೆಯನ್ನು ಅಭಿವೃದ್ದಿ ಪಥದಲ್ಲಿ ಸಾಗಿಸಿ, ರಾಷ್ಟೊ ಮತ್ತು ರಾಜ್ಯದಲ್ಲಿ ಸಹಕಾರಿ ರಂಗದ ಅತ್ಯುತ್ತಮ ಕಾರಖಾನೆಯನ್ನಾಗಿಸುವದು ನನ್ನ ಜೀವನದ ಗುರಿಯಾಗಿದೆ ಎಂದು ಅಧ್ಯಕ್ಷ ಪರ್ಪ ಸವದಿ ಹೇಳಿದರುತಾಲೂಕಿನ ಕೃಷ್ಣಾ ಸಕ್ಕರೆ ಕಾರಖಾನೆಯ ರೈತ ಭವನದಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ಅಧ್ಯಕ್ಷ ಪರ್ಪ ಸವದಿ ಅವರ ಅಭಿಮಾನ ಬಳಗ ಆಯೋಜಿಸಿದ್ದ 67 ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಕಾರ್ಯಭಾರವನ್ನು 18 ವರ್ಷಗಳಿಂದ ಮಾಡುತ್ತಿದ್ದು, ಎಲ್ಲ ರೈತ ಸದಸ್ಯರ, ಕಬ್ಬು ಬೆಳಗಾರರ, ಕಾರಖಾನೆಯ ಸಿಬ್ಬಂದಿಗಳ, ಕಾರ್ಮಿಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ನನ್ನ ಕರ್ತವ್ಯವನ್ನು ಮಾಡಿದ್ದೇನೆ ಎಂದ ಅವರು ಸಹಕಾರಿ ರಂಗದ ಸಕ್ಕರೆ ಕಾರಖಾನೆಗಳ ಸಾಲಿನಲ್ಲಿ ಕೃಷ್ಣಾ ಸಕ್ಕರೆ ಕಾರಖಾನೆ ಮೊದಲ ಸಾಲಿನಲ್ಲಿ ನಿಲ್ಲುವಂತೆ ಮಾಡಲು ಎಲ್ಲರ ಸಹಕಾರ ಮಹತ್ವದ್ದಾಗಿದೆ. ನಿಮ್ಮ ಎಲ್ಲರ ಸಹಕಾರ ಇದೆ ರೀತಿ ನಮ್ಮ ಮೇಲೆ ಇರಲಿ ಎಂದು ಹೇಳಿದರು.
ಸಂಗಮನಾಥ ಬ್ಯಾಂಕಿನ ಅಧ್ಯಕ್ಷ ಮಲ್ಲೇಶ ಸವದಿ, ಕಾರಖಾನೆಯ ಕಛೇರಿ ಅಧಿಕ್ಷಕ ಸುರೇಶ ಠಕ್ಕಣ್ಣವರ, ಖರೀಧಿ ವಿಭಾಗದ ಸಂತೋಷ ಮನಗುಳಿ ಸೇರಿದಂತೆ ಕಾರಖಾನೆಯ ವಿವಿಧ ಇಲಾಖೆಗಳ ಮುಖ್ಯಸ್ಥರು, ಕಾರ್ಮಿಕರು, ಸಿಬ್ಬಂದಿಗಳು, ಅಭಿಮಾನಿಗಳು ಪಾಲ್ಗೊಂಡು ಪರ್ಪ ಸವದಿ ಇವರನ್ನು ಸತ್ಕರಿಸಿದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 