ಪ್ರಗತಿಪರ ಕೃಷಿಕ ಹೆಗಡೆಗೆ ಡಾ.ಎಂ.ಹೆಚ್.ಮರಿಗೌಡ ಸ್ಮಾರಕ ಪ್ರಶಸ್ತಿ
ಲೋಕದರ್ಶನ ವರದಿ
ಯಲ್ಲಾಪುರ: ತೋಟಗಾರಿಕಾ ಸಾಧನೆಗಾಗಿ ತಾಲೂಕಿನ ಕಾನಕೊಡ್ಲಿನ ಪ್ರಗತಿಪರ ಕೃಷಿಕ ಪ್ರಸಾದ ರಾಮಾ ಹೆಗಡೆಯವರಿಗೆ ಡಾ.ಎಂ.ಹೆಚ್.ಮರಿಗೌಡ ಸ್ಮಾರಕ ಪ್ರಶಸ್ತಿ ಲಭಿಸಿದೆ.
ಕಾಳು ಮೆಣಸು ಹಾಗೂ ದಾಲ್ಚಿನ್ನಿ ಬೆಳೆ ಸಂರಕ್ಷಣೆ, ಸಂಶೋಧನೆ ಮತ್ತು ಸಾವಿರಕ್ಕೂ ಮಿಕ್ಕ ಸಸ್ಯ ತಳಿ ರಕ್ಷಣೆಯಲ್ಲಿನ ಮಹತ್ತರ ಸಾಧನೆಗಾಗಿ ಇವರು ಪ್ರಶಸ್ತಿಗೆ ಭಾಜನನರಾಗಿದ್ದಾರೆ. ಬೆಂಗಳೂರಿನ ಕೃಷಿ ವಿವಿ ವಾಷರ್ಿಕವಾಗಿ ನೀಡುವ ಈ ಪ್ರಶಸ್ತಿ 25,000 ರು. ನಗದು ಸ್ಮರಣಿಗೆ ಒಳಗೊಂಡಿದೆ. ಗುರುವಾರ ಬೆಂಗಳೂರಿನ ಕೃಷಿ ವಿವಿ ಆವಾರದಲ್ಲಿ ನಡೆದ ಕೃಷಿ ಮೇಳದ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಕೃಷಿ ಸಚಿವ ಶಿವಶಂಕರ ರೆಡ್ಡಿ ಪ್ರಸಾದ ಹೆಗಡೆಗೆ ಪ್ರಶಸ್ತಿ ಪ್ರಧಾನ ಮಾಡಿದರು.
ಹೆಗಡೆಯವರು ಕಾಳುಮೆಣಸು, ಅಡಕೆ, ದಾಲ್ಚಿನ್ನಿ ಪಳಗೊಂಡು ಹಲವಾರು ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದು, ಇವರ ಸಾಧನೆಯಲ್ಲಿ ತಂದೆ ರಾಮಾ ಹೆಗಡೆ, ತಾಯಿ ಸರಸ್ವತಿ ಹೆಗಡೆ ಸಹಕಾರವಿದೆ. ಪ್ರಗತಿಪರ ಕೃಷಿಕರಾಗಿರುವ ಇವರಿಗೆ ಈ ಮೊದಲು ರಾಜ್ಯ ಸಕರ್ಾರ ನೀಡುವ ಕೃಷಿ ಪಂಡಿತ ಪ್ರಶಸ್ತಿಯೂ ಲಭಿಸಿದೆ.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 