ಬಳ್ಳಾರಿ: ವ್ಯಾಸರಾಜ ಬೃಂದಾವನ ಮರು ನಿರ್ಮಾಣ ಪ್ರತಿಷ್ಟಾಪನೆ
ಲೋಕದರ್ಶನ ವರದಿ
ಬಳ್ಳಾರಿ 19: ಹಂಪಿಯ ಬಳಿ ಇರುವ ಆನೆಗುಂದಿಯ ನವ ಬೃಂದಾವನ ಗಡ್ಡೆಯಲ್ಲಿ ಶ್ರೀ ವ್ಯಾಸರಾಜ ತೀರ್ಥರ ಮೂಲ ಬೃಂದಾವನ ಪುನರ್ ನಿರ್ಮಾಣ ಕಾರ್ಯ ತಡರಾತ್ರಿಯಿಂದಲೇ ಆರಂಭವಾಗಿದೆ.
ನವ ಬೃಂದಾವನದ ಗಡ್ಡೆಯಲ್ಲಿದ್ದ ವ್ಯಾಸರಾಜ ತೀರ್ಥರ ಬೃಂದಾವನ ಅದೇ ಸ್ಥಳದಲ್ಲಿಯೇ ಮರು ನಿರ್ಮಾಣ ಕಾರ್ಯವಾಗಿದೆ. ವ್ಯಾಸರಾಜ ಮಠ. ರಾಯರ ಮಠ, ಉತ್ತರಾಧಿ ಮಠ, ವಾದಿರಾಜರ ಮಠ, ಮಾದವ ತೀರ್ಥ ಮಠ ಸ್ವಾಮಿಜೀಗಳ ನೇತೃತ್ವದಲ್ಲಿ ವ್ಯಾಸರಾಜ ತೀರ್ಥರ ಬೃಂದಾವನ ಮರು ನಿರ್ಮಾಣವಾಗಿದೆ.
ಈ ಹಿಂದೆ ಇದ್ದ ಮಾದರಿಯಲ್ಲಿಯೇ ನಿರ್ಮಾಣ ಮಾಡಿದ್ದು ತಜ್ಞ ಶಿಲ್ಪಿಗಳು ಅವಶೇಷಗಳನ್ನು ಸಂಗ್ರಹಿಸಿದ್ದಾರೆ. ಮರು ನಿರ್ಮಾಣಕ್ಕೆ ಬಳಕೆಗೆ ಬರಬಹುದಾದ ಕಲ್ಲುಗಳನ್ನು ಬಳಸಿದ್ದಾರೆ. ಉಳಿದಿರುವುದನ್ನು ಹೊಸದಾಗಿ ಕೆತ್ತನೆ ಮಾಡಬೇಕಾ.. ಅಥವಾ ಇರುವುದರಲ್ಲಿಯೇ ಬಳಸಿಕೊಂಡು ಮರು ಜೋಡಣೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದರು. ಸದ್ಯ ನಡುಗಡ್ಡೆಯಲ್ಲಿ ಮೂಲಕ ಬೃಂದಾವನ ಸ್ಥಳದಲ್ಲಿಯೇ ಪಾಣಿಪೀಠವನ್ನು ಸಿದ್ದಪಡಿಸಿಲಾಗಿದೆ. ಬೃಂದಾವನದ ಮೆಲ್ಭಾಗವನ್ನು ಪೂರ್ಣಗೊಳಿಸಿ ಬೃಂದಾವನ ಮರು ನಿರ್ಮಾಣದ ಬಳಿಕವೇ ಪುನರ್ ಪ್ರತಿಷ್ಟಾಪನೆ ಕಾರ್ಯ ಸೇರಿದಂತೆ ಇತರ ದಾರ್ಮಿಕ ಕಾರ್ಯಕ್ರಮಗಳು ನಡೆದಿವೆ ಎಂದು ಮಠದ ಮೂಲಗಳು ತಿಳಿಸಿವೆ.
ನಡುಗಡ್ಡೆಗೆ ಗುರುವಾರ ರಾತ್ರಿಪೇಜಾವರ ಮಠದ ಶ್ರೀಗಳು, ಶ್ರೀಪಾದ ರಾಜರಮಠದ ಶ್ರೀಗಳು, ಸೇರಿದಂತೆ ನಾನಾ ಮಠದ ಪೀಠಾದಿಪತಿಗಳು ಆಗಮಿಸಿದ್ದು. ನಡೆದ ಎಲ್ಲಾ ಗಟನೆಯನ್ನು ನೋಡಿ ಪುನರ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು. ನಿರ್ಮಾಣಕ್ಕೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ನಾನಾ ಕಡೆಗಳಿಂದ ಭಕ್ತರು ಆಗಮಸುತ್ತಿದ್ದಾರೆ. ಸ್ಥಳದಲ್ಲಿ ಸೂಕ್ತ ಪೋಲಿಸ್ ಬಂದೊಬಸ್ತ್ ಕೈಗೊಳ್ಳಲಾಗಿದೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 