ಅಯ್ಯಪ್ಪ ಸ್ವಾಮಿಯ 5ನೇ ವರ್ಷದ ಮಹಾಪೂಜೆ: ಎಣ್ಣೆ ಸೇವೆ
Ayyappa Swami's 5th Year Mahapuja
ಜಮಖಂಡಿ 25: ತಾಲೂಕಿನ ಆಲಬಾಳ ಗ್ರಾಮದಲ್ಲಿ ಮಣಿಕಂಠ ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿಯ 5ನೇ ವರ್ಷದ ಮಹಾಪೂಜೆಯಲ್ಲಿ ಮಾಲಾಧಾರಿಗಳು ಎಣ್ಣೆ
ಸೇವೆ ಮಾಡುವ ಜೊತೆಗೆ ಅದ್ದೂರಿಯಾಗಿ ನಡೆಯಿತು.
ಅಯ್ಯಪ್ಪ ಸ್ವಾಮಿಗೆ ವಿವಿಧ ಹೂವಿನಿಂದ ಅಲಂಕರಿಸಿ. ಅಭಿಷೇಕ ಪೂಜೆಯನ್ನು ಮಾಡಲಾಯಿತು. ನೂರಾರು ಮಾಲಾಧಾರಿಗಳು ಅಯ್ಯಪ್ಪನ ಭಕ್ತಿ ಗೀತೆಗಳನ್ನು ಹಾಡುವ ಮೂಲಕ ನಾಮಸ್ಮರಣೆಯನ್ನು ಮಾಡುತ್ತಿದ್ದರು. ಅಯ್ಯಪ್ಪನ ಆಭರಣದ ಪೆಟ್ಟಿಗೆಯನ್ನು ಮಾಲಾಧಾರಿಗಳು ಹೆಜ್ಜೆಯನ್ನು ಹಾಕುತ್ತಾ ಹಾಡುಗಳನ್ನು ಹಾಡುತ್ತಾ ಆಭರದ ಪೆಟ್ಟಿಗೆಯನ್ನು ಸನ್ನಿಧಾನಕ್ಕೆ ತರಲಾಯಿತು. ನೂರಾರು ಮಾಲಾಧಾರಿಗಳು ಕುದಿಯುತ್ತಿರುವ ಎಣ್ಣೆಯಲ್ಲಿ ಭಜಿಯನ್ನು ಬಿಡಲಾಯಿತು. ಎಲ್ಲ ಮಾಲಾಧಾರಿಗಳು ಎಣೆಯಲ್ಲಿ ಕೈ ಹಾಕಿ ಭಜಿಯನ್ನು ತೆಗೆದು ಭಕ್ತಿ ಭಾವವನ್ನು ಮೆರೆದರು.
ಮಣಿಕಂಠ ಸನ್ನಿಧಾನದಲ್ಲಿ ದೀಪಗಳ ಅಲಂಕಾರ, ನಾನಾ ಬಗ್ಗೆಯ ಹೂವಿನ ಅಲಂಕಾರದಿಂದ ಅಯ್ಯಪ್ಪನ ಸನ್ನಿಧಾನವನ್ನು ಅಲಂಕರಿಸಿದರು. ಅಯ್ಯಪ್ಪನ ಪೂಜೆಯನ್ನು ಮುಗಿದ ಬಳಿಕ ಅನ್ನಸಂತರೆ್ನಯನ್ನು ಮಾಡಿದರು. ಮಹಾಲಿಂಗ ಗುರುಸ್ವಾಮೀಜಿಯವರು ಅಯ್ಯಪ್ಪನ ಮಂತ್ರವನ್ನು ಹೇಳುವ ಮೂಲಕ ಅಭಿಷೇಕ ಪೂಜೆ ಹಾಗೂ ಕುಂಕುಮ ಪೂಜೆ, ಆರತಿ ಪೂಜೆ ಹೀಗೆ ಹಲವಾರು ಪೂಜೆಯನ್ನು ನೇರವೇರಿಸಿದರು.
ಇದೇ ಸಂದರ್ಭದಲ್ಲಿ ಅಭಯ ಗುರುಸ್ವಾಮಿ, ಅಜೇಯ ಗುರುಸ್ವಾಮಿ, ಗೋಪಾಲ ಗುರುಸ್ವಾಮಿ, ಶಿವಲಿಂಗ ಗುರುಸ್ವಾಮಿ, ಸದಾನಂದ ಗುರುಸ್ವಾಮಿ, ರವಿ ಗುರುಸ್ವಾಮಿ,ಹನುಮಂತ ಗುರುಸ್ವಾಮಿ, ಮಾಂತು ಗುರುಸ್ವಾಮಿ, ಬಾಳು ಗುರುಸ್ವಾಮಿ
ಸೇರಿದಂತೆ ಜಮಖಂಡಿ, ಮುದೋಳ ತಾಲೂಕಿನ ಅಯ್ಯಪ್ಪನ ಮಾಲಾಧಾರಿಗಳು ಸೇರಿದಂತೆ ಅನೇಕ ಭಕ್ತಾಧಿಗಳು ಪೂಜೆಯಲ್ಲಿ ಭಾಗಿಯಾಗಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 