ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 

ವಚನ:
ಅಯ್ಯಾ, ನೀ ಮಾಡಲಾದ ಜಗತ್ತು, ಅಯ್ಯಾ ನೀ ಮಾಡಲಾದ ಸಂಸಾರ,
ಅಯ್ಯಾ, ನೀ ಮಾಡಲಾದ ಮರವೆ, ಅಯ್ಯಾ, ನೀ ಮಾಡಲಾದ ದುಃಖ,
ಅಯ್ಯಾ, ನೀ ಬಿಡಿಸಿದಡೆ ಬಿಟ್ಟಿತ್ತು ತಾಮಸ.
ಅಯ್ಯಾ ನಾನೀ ಮಾಯೆಯ ಗೆದ್ದೆನೆಂಬ ಹಮ್ಮಿನ್ನೇಕೆ
ಕೂಡಲಸಂಗಮದೇವಾ.
ಅರ್ಥ:
ಹೇ ಸೃಷ್ಟಿಕರ್ತ ಪರಮಾತ್ಮನೇ ಇದು ನೀನು ಮಾಡಿದ ಪ್ರಪಂಚ, ಈ ಪ್ರಪಂಚದಲ್ಲಿ ನಾನು ಸಂಸಾರದ, ಸುಖ- ದುಃಖಗಳ, ನೋವು-ನಲಿವುಗಳ ಬಂಧನದಲ್ಲಿ ಸಿಲುಕಿಕೊಂಡಿದ್ದೇನೆ. ಹೇ ಭಗವಂತ ಈ ಬಂಧನಗಳಿಂದ ನೀನು ಬಿಡಿಸಿದರೆ ಮಾತ್ರ ನಾನು ಈ ಮಾಯಾ ಪ್ರಪಂಚದಿಂದ ಬಿಡುಗಡೆಯಾಗಲು ಸಾಧ್ಯ. ನೀನು ಬಿಡುಗಡೆ ಮಾಡಿದ ನಂತರವೂ "ನಾನು ಈ ಮಾಯೆಯನ್ನು ಗೆದ್ದು ಬಿಟ್ಟೆನೆಂಬ" ಅಹಂಕಾರ ನನಗೇಕೆ ಬರುತ್ತದೆ ಭಗವಂತ..?
- ಶ್ವೇತಾ ಫಣಿವೇಣಿ