ಆಲಮಟ್ಟಿ 07: ಶಿಕ್ಷಕರ ಬೋಧನಾ ಪ್ರಕ್ರಿಯೆ ಚೆನ್ನಾಗಿದ್ದಲ್ಲಿ ಮಕ್ಕಳ ಮನಸ್ಸು ಗೆಲ್ಲಬಹುದಲ್ಲದೇ ಶಾಲೆಯಲ್ಲಿ ಮಕ್ಕಳ ಸಂಖ್ಯೆಯು ಹೆಚ್ಚಳಕ್ಕೆ ಕಾರಣವಾಗಬಹುದು. ಆ ಹಿನ್ನೆಲೆಯಲ್ಲಿ ಶಿಕ್ಷಕರ ಪಾಠ, ಪ್ರವಚನ ನಿತ್ಯ ಉತ್ಕಟವಾಗಿ, ಪರಿಣಾಮಕಾರಿಯಾಗಿ ಸಾಗಬೇಕು ಎಂದು ಗದಗ ಜಿಲ್ಲಾ ಡಯಟ್ ತರಬೇತಿ ಕೇಂದ್ರದ ಉಪನ್ಯಾಸಕ ಜಿ.ಡಿ.ದಾಸರ ಅಭಿಪ್ರಾಯಿಸಿದರು.
ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯ ಶಾಲಾ,ಕಾಲೇಜುಗಳಿಗೆ ಶುಕ್ರವಾರ ಅನೀರೀಕ್ಷಿತ ಭೇಟಿ ನೀಡಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಸಂಸ್ಥೆಯ ಪರವಾಗಿ ನೀಡಿದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬೋಧನಾ ಕೈಂಕರ್ಯ ಸಮರ್ಕವಾಗಿದ್ದಲ್ಲಿ ವಿದ್ಯಾರ್ಥಿಗಳ ಮನದಾಳದಲ್ಲಿ ಶಿಕ್ಷಕರು ಪ್ರೀತಿ,ಗೌರವ ಭಾವದಿಂದ ನೆಲೆ ಕಾಣಬಹುದು ಎಂದರು.ಶಿಕ್ಷಕರ ಸರಳತೆಯ ನಡೆ, ನುಡಿ ಹಾಗೂ ಬೋಧನಾ ಶೈಲಿಯನ್ನು ಮಕ್ಕಳು ಆರಾಧಿಸಿ ಅನುಕರಿಸುವತ್ತಾರೆ. ಪೂಜ್ಯನೀಯ ಭಾವದಿಂದ ಕಂಡು ಗೌರವಿಸುತ್ತಾರೆ. ಕಾರಣ ಶಿಕ್ಷಕ ಪವಿತ್ರ ವೃತ್ತಿಯಲ್ಲಿರುವರು ತಮ್ಮ ಕಾಯಕ, ನಿಷ್ಟೆ ಪೂರ್ವ ತಯಾರಿಯೊಂದಿಗೆ ಗುಣಮಟ್ಟದ ಬೋಧನೆಗೆ ಯೋಗ್ಯರಾಗಬೇಕು ಎಂದರು. ಮಕ್ಕಳ ಒಳ ಮನಸ್ಸು,ಚಲನ,ವಲನ,ಅಧ್ಯಯನದ ಆಸಕ್ತಿಯುಳ್ಳ ಮನಸ್ಥಿತಿ ಅಥೈ9ಸಿಕೊಂಡು ಪಾಠದತ್ತ ಸಾಗಿದರೆ ಉತ್ತಮ. ನಿಮ್ಮೊಳಗಿನ ಪಾಠ, ಪ್ರವಚನ ಬೋಧನಾ ಶಕ್ತಿ,ಕೌಶಲ್ಯ ಪ್ರೇರಣಾದಾಯಕವಾಗಿ ಹೊರಹೊಮ್ಮಿಸಿ. ಎಲ್ಲಿ ಉತ್ತಮ ಗುಣಮಟ್ಟದ ಬೋಧನಾ ಪ್ರಕ್ರಿಯೆ ನಡೆಯುತ್ತದೆಯೋ ಅಲ್ಲಿ ಮಕ್ಕಳ ಸಂಖ್ಯೆ ಅಧಿಕಗೊಂಡಿರುತ್ತದೆ. ಶಾಲೆಗೆ ಮಕ್ಕಳು ಪ್ರವೇಶ ಪಡೆಯುವಾಗ ಶಾಲೆ ಹಾಗೂ ಶಿಕ್ಷಕರ ಬಗ್ಗೆ ಪಾಲಕ, ಪೋಷಕರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಇಂದು ಪಾಲಕ ಹಾಗೂ ವಿದ್ಯಾರ್ಥಿಗಳ ಸಮೂಹ ಬಹಳಷ್ಟು ಜಾಗರೂಕರಾಗಿದ್ದಾರೆ.ಮಕ್ಕಳ ಪಠ್ಯ ಜ್ಞಾನದ ಪ್ರಭುತ್ವದ ಸಂತೋಷ ಪರ ಇಂಗಿತವನ್ನು ಪೋಷಕರು ಬಯಸುತ್ತಾರೆ ಎಂದರು.
ಇದೇ ವೇಳೆ ಎಂ.ಎಚ್.ಎಂ.ಪ್ರಾಥಮಿಕ, ಪ್ರೌಢಶಾಲೆ, ಪ.ಪೂ ಕಾಲೇಜ್, ಪದವಿ ಕಾಲೇಜ್ ಗಳಿಗೆ ಬೇಟಿ ನೀಡಿ ಶೈಕ್ಷಣಿಕ ವ್ಯವಸ್ಥೆ ಆಲಿಸಿದರು. ಕರುನಾಡು ಗಾಂಧಿ ಮಂಜಪ್ಪ ಹಡೇ9ಕರ ಸ್ಮಾರಕ ಭವನಕ್ಕೆ ತೆರಳಿ ಮಂಜಪ್ಪ ಹಡೇ9ಕರ ಶರಣರ ಮೂತಿ9 ದರುಶನ ಪಡೆದರು. ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಅವರ ಮಾರ್ಗದರ್ಶನದಲ್ಲಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಶಿಕ್ಷಕ ಬಳಗ ಅತಿಥಿ ಗೌರವಾರ್ಥ ಉಪನ್ಯಾಸಕ ಜಿ.ಡಿ.ದಾಸರ ಅವರಿಗೆ ಶಾಲೆ,ಸಂಸ್ಥೆಯ ಪರವಾಗಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ಎಂ.ಎಚ್.ಎಂ.ಪ್ರೌಢಶಾಲೆಯಲ್ಲಿಯೂ ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ಹಾಗೂ ಧೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಹಿರೇಮಠ ನೇತೃತ್ವದಲ್ಲಿ ಜಿ.ಡಿ.ದಾಸರ ಅವರಿಗೆ ಸನ್ಮಾನಿಸಲಾಯಿತು.
ಎಂ.ಎಚ್.ಎಂ.ಪ.ಪೂ ಹಾಗೂ ಪದವಿ ಕಾಲೇಜು ಪ್ರಾಂಶುಪಾಲ ಪ್ರಭುಸ್ವಾಮಿ ಹೇಮಗಿರಿಮಠ ಸಂಸ್ಥೆಯ ಶೈಕ್ಷಣಿಕ ಪ್ರಗತಿ, ಬೆಳವಣಿಗೆ ಕುರಿತು ಜಿ.ಡಿ.ದಾಸರ ಅವರಿಗೆ ಮಾಹಿತಿ ನೀಡಿದರು.
ಉಪನ್ಯಾಸಕ ಟಿ.ಬಿ.ಕರದಾನಿ, ಶಿಕ್ಷಕರಾದ ಎಸ್.ಎಚ್.ನಾಗಣಿ, ಗುಲಾಬಚಂದ ಜಾಧವ, ಆರ್.ಎಂ.ರಾಠೋಡ, ಎಂ.ಬಿ.ದಶವಂತ, ಎಲ್.ಆರ್.ಸಿಂಧೆ, ಶ್ರೀಧರ ಚಿಮ್ಮಲಗಿ, ಸಚಿನ ಹೆಬ್ಬಾಳ, ಮಹೇಶ ಗಾಳಪ್ಪಗೋಳ, ಎಂ.ಎಚ್.ಬಳಬಟ್ಟಿ, ಸರಸ್ವತಿ ಈರಗಾರ, ಕೆ.ಜಗದೇವಿ, ಜ್ಯೋತಿ, ಧನರಾಜ ಸಿಂಗಾರಿ, ಶೇಖು ಲಮಾಣಿ, ಸಿದ್ದು ಪಟ್ಟಣಶೆಟ್ಟಿ ಇತರರಿದ್ದರು.