ದೇವಸ್ಥಾನ ಕಾಮಗಾರಿ ನಿಲ್ಲಿಸುವಂತೆ ಗ್ರಾಮಸ್ಥರ ಬಿಗಿಪಟ್ಟು

Villagers demand to stop temple work

ಕಳಪೆ ಕಾಮಗಾರಿಯ ಗುತ್ತಿಗೆದಾರ-ಇಂಜಿನಿಯರ್ ವಿರುದ್ಧ ಕ್ರಮಕ್ಕೆ ಪರಶುರಾಮ ಕೊಣ್ಣೂರ ಆಗ್ರಹ 

ಮುದ್ದೇಬಿಹಾಳ 07; ಭೂಮಿಯ ಮೇಲಿನ ಪ್ರತಿಯೊಂದು ವಸ್ತು ಹಾಗೂ ಕಣಕಣದಲ್ಲಿ ದೇವರಿದ್ದಾನೆಂದು ಹಿರಿಯರ ಕಾಲದಿಂದಲೂ ಬಂದ ಪ್ರತೀತಿ ಹಾಗೂ ನಂಬಿಕೆ. ಮನಕುಲವು ಭಯ-ಭಕ್ತಿಯಿಂದ ಬದುಕಲೆಂದು ಪೂಜಿಸಲು ನಿರ್ದಿಷ್ಟ ಸ್ಥಳದಲ್ಲಿ ಸರ್ಕಾರವು ಸಹ ದೇಗುಲಗಳನ್ನು ನಿರ್ಮಿಸುತ್ತಿದೆ. ಆದರೆ ತಾಲೂಕಿನ ಹಂಡರಗಲ್ಲ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ತ್ರಿಕೂಟೇಶ್ವರ ದೇವಸ್ಥಾನ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟ ಇರುವುದು ಮೇಲ್ನೋಟಕ್ಕೆ ಬೆಳಕಿಗೆ ಬಂದಿದೆ. 

ಹೌದು.. ಕಲ್ಯಾಣಿ ಚಾಲುಕ್ಯ ಎರಡನೇ ಜಗದೀಶ ಮಲ್ಯ ಅರಸರು ಕ್ರಿ.ಶ. 1123ರಲ್ಲಿ ತಾವು ಗೆದ್ದ 108 ಯುದ್ಧಗಳ ಕುರುಹಿಗಾಗಿ ತಾಲೂಕಿನ ಹಂಡರಗಲ್ಲ ಗ್ರಾಮದ ತ್ರಿಕೂಟೇಶ್ವರ ದೇವಸ್ಥಾನ ಕಟ್ಟಿಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಸುತ್ತ ಶಿಲಾಶಾಸನದಲ್ಲೂ ಉಲ್ಲೇಖವಿದೆ. ಈ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಈ ಹಿಂದೆ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಆಯುಕ್ತರ ವಿಶೇಷ ಅನುದಾನ ಅಡಿಯಲ್ಲಿ 74 ಲಕ್ಷ ರೂ ಬಿಡುಗಡೆ ಮಾಡಲಾಗಿತ್ತು, ಆದರೆ ಗ್ರಾಮಸ್ಥರು ಗುಣಮಟ್ಟದ ಕಾಮಗಾರಿಗೆ ಎಚ್ಚರಿಸಿದ್ದರೂ ಗುತ್ತಿಗೆದಾರ ಮಾತ್ರ ಕಳಪೆ ಕಾಮಗಾರಿ ಮಾಡಿದ್ದರಿಂದ ಗ್ರಾಮಸ್ಥರು ಇಂಜಿನಿಯರ್ ವಿರುದ್ಧ ದೂರು ನೀಡಿದ್ದರು. ಒಂದು ಕಡೆ ದೇವಸ್ಥಾನ ಕಾಮಗಾರಿ ಬಗ್ಗೆ ದೂರು ದಾಖಲಾಗಿ ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿದ್ದರೆ ಇನ್ನೊಂದು ಕಡೆ ತ್ರಿಕೂಟೇಶ್ವರ ದೇವಸ್ಥಾನ ಹಂಡರಗಲ್ಲ ಗ್ರಾಮದ ಕಾಮಗಾರಿಗೆ ಪುರಾತತ್ವ ಸಂರಕ್ಷಣಾ ಇಲಾಖೆ ಪರಂಪರೆ ಇಲಾಖೆ ಮೈಸೂರಿನಿಂದ ಹೆಚ್ಚುವರಿಯಾಗಿ 48 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು, ಈಗ ಮತ್ತೆ ಕಾಮಗಾರಿ ಆರಂಭ ಮಾಡಲಾಗಿದೆ. ಇದಕ್ಕೆ ಗ್ರಾಮಸ್ಥರು ತೀವ್ರ ಅವಿರೋಧ ವ್ಯಕ್ತಪಡಿಸುವುದಲ್ಲದೇ ಕಳಪೆ ಕಾಮಗಾರಿ ನಿರ್ಮಾಣ ನಿಲ್ಲಿಸುವಂತೆ ಬಿಗಿಪಟ್ಟು ಹಿಡಿದರು.ಈ ಮೊದಲು ದೇವಸ್ಥಾನದ ಬುಡದ ಕಾಮಗಾರಿಯಲ್ಕಿ ಸಂಪೂರ್ಣ ಕಳಪೆ ಗುಣಮಟ್ಟದ ಕಾಮಗಾರಿ ನಿರ್ಮಿಸಲಾಗಿದೆ. ದೇವಸ್ಥಾನ ಕಳಪೆ ಕಾಮಗಾರಿ ನಂತರವೂ ಈಗ ಮತ್ತೆ ಕಾಮಗಾರಿ ಆರಂಭಿಸಲಾಗಿದೆ. ಕಳಪೆ ಕಾಮಗಾರಿ ಮೇಲೆಯೇ ಮತ್ತೆ ಕಾಮಗಾರಿ ಆರಂಭಿಸಲಾಗಿದೆ. ಒಂದು ವೇಳೆ ದೇವಸ್ಥಾನ ಜೀರ್ಣೋದ್ಧಾರ ಮತ್ತೆ ಆರಂಭಿಸುವುದಾದರೆ ದೇವಸ್ಥಾನ ಬುಡದಿಂದ(ತಳ) ಕಾಮಗಾರಿ ಮಾಡಿ ಇಲ್ಲದಿದ್ದರೆ ಈ ಬಗ್ಗೆ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ. ದೇವಸ್ಥಾನ ಕಳಪೆ ಕಾಮಗಾರಿ ನಿರ್ಮಿಸಿದ ಗುತ್ತಿಗೆದಾರ ಹಾಗೂ ಇಂಜಿನಿಯರ್ ವಿರುದ್ಧ ಕಾನೂನು ಹೋರಾಟ ಮಾಡಲು ತಯಾರಿದ್ದೇವೆ. ಅಲ್ಲಿವರೆಗೂ ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ಗ್ರಾಮಸ್ಥರು ಪರೀಶೀಲನೆಗೆ ಬಂದ ಪುರಾತತ್ವ ಸಂರಕ್ಷಣಾ ಇಲಾಖೆ ಧಾರವಾಡ ಅವರಿಗೆ ಮನವಿ ನೀಡಿ ಆಕ್ರೋಶ ಹೊರಹಾಕಿದರು. 

*ಕಾಟಾಚಾರಕ್ಕೆ ತನಿಖೆ ಮಾಡಿದ್ರಾ ಲೋಕಾಯುಕ್ತರು*?74 ಲಕ್ಷ ರೂ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಮೇಲ್ನೋಟಕ್ಕೆ ನಿರ್ಮಾಣ ಕಾಮಾಗಾರಿ ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದೆ. ಎಲ್ಲೆಂದರಲ್ಲಿ ಕಲ್ಲು ಚಿಪ್ಪು ಇಡಲಾಗಿದೆ. ಒಳ ಗೋಡೆಯಿಂದ ನೋಡಿದರೆ ಹೊರಗೆ ಕಾಣುತ್ತವೆ. ಒಂದು ಕಂಬ ಎತ್ತರ ಇದ್ದರೆ ಇನ್ನೊಂದು ಕಂಬ ಕೆಳಭಾಗದಲ್ಲಿ ಜೋಡಿಸಿರುವುದು, ಕಲ್ಲು ಜೋಡಣೆ ಮಾಡುವಾಗ ಸರಿಯಾಗಿ ಜೋಡಣೆ ಮಾಡದೆ ಬೇಕಾಬಿಟ್ಟಿ ಇಟ್ಟಿರುವುದು ಇದೇ ರೀತಿ ಹಲವು ಲೋಪ ದೋಷಗಳು ಮೇಲ್ನೋಟಕ್ಕೆ ಕಂಡುಬಂದರೆ, ಆದರೆ ಲೋಕಾಯುಕ್ತ ಬೆಂಗಳೂರು ಗುಣಮಟ್ಟದ ನಿರ್ಮಾಣ ಕಾಮಗಾರಿವಿದ್ದು, ಹೆಚ್ಚುವರಿ ಕಾಮಗಾರಿ ಆರಂಭಿಸುವಂತೆ ಕರ್ನಾಟಕ ಲೋಕಾಯುಕ್ತರು ಪತ್ರದ ಮೂಲಕ ಪುರಾತತ್ವ ಸಂರಕ್ಷಣಾ ಇಲಾಖೆಗೆ ಹೇಳಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. 

ಈ ದೇವಸ್ಥಾನದ ಮೊದಲಿನ ಕಲ್ಲು ಬಳಸಿಕೊಳ್ಳುವುದಲ್ಲದೇ, ಈಗಿನ ಹೊಸ ಕಲ್ಲು ಸಹ ಹಿಟ್ಟು ಉದರುತ್ತಿವೆ. ಈ ಕಲ್ಲುಗಳು ಗುಣಮಟ್ಟದ ಕಲ್ಲು ಇಲ್ಲ. ದೇವಸ್ಥಾನ ಜೀರ್ಣೋದ್ಧಾರಕ್ಕೂ ಮೊದಲು ಸೋರುತ್ತಿರಲಿಲ್ಲ. ಮಳೆ ಬಂತೆಂದರೆ ಎಲ್ಲೆಂದರಲ್ಲಿ ಸಂಪೂರ್ಣ ಜಲಾವೃತಗೊಳ್ಳುತ್ತದೆ. ಅಲ್ಲದೇ ನಿರ್ಮಾಣ ಆಗುತ್ತಿರುವ ದೇವಸ್ಥಾನ ವಾಸ್ತು ಪ್ರಕಾರವಿಲ್ಲ. ದೇವಸ್ಥಾನ ಮುಂಭಾಗದಲ್ಲಿಯೇ ಒಂದು ಕಂಬ ಎತ್ತರ. ಇನ್ನೊಂದು ಕಂಬ ಕೆಳಭಾಗದಲ್ಲಿ ನಿರ್ಮಿಸಲಾಗಿದೆ. ಇದೇ ರೀತಿ ಹಲವು ಲೋಪದೋಷಗಳನ್ನು ಕಾಮಗಾರಿಯಲ್ಲಿ ಮಾಡಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ತನಿಖೆ ಹಂತದಲ್ಲಿದ್ದು, ಈಗ ತರಾತುರಿಯಾಗಿ ಮತ್ತೆ ಕಾಮಗಾರಿ ಆರಂಭಿಸಿರುವುದು ಹಲವು ಅನುಮಾನ ಹುಟ್ಟುಹಾಕಿದೆ. 

ಕುಮಾರ ಹಿರೇಮಠ, ತ್ರಿಕೂಟೇಶ್ವರ ದೇವಸ್ಥಾನ ಅರ್ಚಕರು 

ದೇವಸ್ಥಾನದ ಕಾಮಗಾರಿಯಲ್ಲಿ ಎಲ್ಲಿಯೂ ಗುಣಮಟ್ಟ ಇಲ್ಲ. ಇದರಿಂದ ದೇವಾಲಯದ ಚಾವಣಿ ಬಿರುಕು ಬಿಟ್ಟು ಮಳೆ ನೀರು ಸೋರಿಕೆಯಾಗುತ್ತಿದೆ. ಎಂಜಿನಿಯರ್ ಮತ್ತು ಗುತ್ತಿಗೆದಾರ ಇಬ್ಬರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸುವುದು, ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವುದರ ಜತೆಗೆ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ ಹಾಗೂ ಅನುಮತಿಸಿದ ಇಂಜಿನಿಯರ್ ಗಳಿಂದ 74 ಲಕ್ಷ ರೂ ಹಣ ಮರಳಿ ಸರ್ಕಾರಕ್ಕೆ ಕಟ್ಟಿಸಿಕೊಳ್ಳಬೇಕು. 

ಸಾಹೇಬ್ ಪಟೇಲ್, ಹಂಡರಗಲ್ಲ ಗ್ರಾಮಸ್ಥ