ಮುಂಡಗೋಡ 13 : ಪಟ್ಟಣ ಪಂಚಾಯತ ಹತ್ತಿರ ಇರುವ ನೌಕರ ಭವನದ ಹತ್ತಿರ ಪ್ಲಾಟಿನ ಬೈಕ ಕಳ್ಳತನ ಮಾಡಿದ ವ್ಯಕ್ತಿಯೊಬ್ಬನನ್ನು ಇಲ್ಲಿಯ ಪೋಲಿಸರು ಗುರುವಾರ ಬಂಧಿಸಿದ್ದಾರೆ. ಬೈಕ್ ಕಳ್ಳತನ ಮಾಡಿದ ಅರೋಪಿ ಯಲ್ಲಾಪುರ ತಾಲೂಕಿನ ಮಂಚಿಕೇರಿ ನಾಸಿರ್ ಅಹಮ್ಮದ ಇಮಾಮಸಬಾ ಸೈಯದ್ ಸಿದ್ದಿ ( 38). ಎಂಬಾತನನ್ನು ಬಂಧಿಸಿದ್ದಾರೆ. ಪಟ್ಟಣ ಪಂಚಾಯತ್ ಸಭಾಭವನದ ಹತ್ತಿರ ನಿಲ್ಲಿಸಿದ್ದ ಪ್ಲಾಟಿನ್ ಬೈಕನ್ನು ಕಳ್ಳರು ಬೈಕ್ ಕದ್ದೊಯ್ದಿರುವುದು ಗೊತ್ತಾಗಿದೆ. ಕೂಡಲೇ ಮುತ್ತಣ್ಣ ರಾಮಣ್ಣ ಭೋವಿ ಎಂಬುವರ ನೀಡಿದ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಎಸ್ಪಿ ಎಂ. ನಾರಾಯಣ, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ. ಮತ್ತು ಜಗದೀಶ ನಾಯ್ಕ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಸಿಪಿಐ ರಂಗನಾಥ ನೀಲಮ್ಮನವರ, ಕ್ರೈಂ ಪಿಎಸ್ಐ ವಿನೋದ ಎಸ್.ಕೆ ಪಿ.ಎಸ್.ಐ. ಪರಶುರಾಮ ಮಿರ್ಜಗಿ, ಹಾಗೂ ಸಿಬ್ಬಂದಿಗಳಾದ ಮಂಜು ಚಿಂಚಲಿ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಂಬಾಣಿ ಮುಂಡಗೋಡ ಪೊಲೀಸ್ ಠಾಣೆ, ಹಾಗೂ ಟೇಕ್ನಿಕಲ್ ಸೇಲ್ ಕಾರವಾರದ ಸಿಬ್ಬಂದಿಗಳಾದ ಉದಯ ಗುನಗಾರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.