ಸಂಬರಗಿ 07:ಮಹಾರಾಷ್ಟ್ರದ ಜತ್ತ ತಾಲೂಕಿನ ಡಪಳಾಪೂರ ಗ್ರಾಮದ ಶ್ರೀಪತಿ ಶುಗರ್ಸ ್ಘ ಪಾವರ ಲಿಮಿಟೆಡ್ ಕಾರ್ಖಾನೆ ಕರ್ನಾಟಕದ ಅಥಣಿ ಹಾಗೂ ಕಾಗವಾಡ ತಾಲೂಕಿನಿಂದ ಕಬ್ಬಿನ ಸಾಗಾಣಿಕೆ ಮಾಡಿದ್ದಾರೆ. ಅಂತಹ ರೈತರಿಗೆ ಪ್ರತಿ ಟನ್ಗೆ ಅರ್ಧ ಕೆ.ಜಿ ಸಕ್ಕರೆ, ಕಳೆದ ವರ್ಷದ ಎರಡನೆ ಕಂತ ಹಾಗೂ ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ ನೀಡಬೇಕೆಂದು ಅಥಣಿ ತಾಲೂಕಾ ರೈತ ಸಂಘದ ಅಧ್ಯಕ್ಷರಾದ ಮಹಾದೇ ಮಡಿವಾಳ ಇವರ ನೇತೃತ್ವದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಜೋಶಿಯವರಿಗೆ ಮನವಿ ಸಲ್ಲಿಸಿದರು.
ಈ ಕಾರ್ಖಾನೆ ಮಹಾರಾಷ್ಟ್ರದಲ್ಲಿ ಇದ್ದರೂ ಸಹ ಅಥಣಿ ಹಾಗೂ ಕಾಗವಾಡ ತಾಲೂಕಿನಿಂದ ಹೆಚ್ಚು ಕಬ್ಬು ಸಾಗಾಣಿಕೆ ಮಾಡುತ್ತಾರೆ. ಕಳೆದ ವರ್ಷ ಪ್ರತಿ ಟನ್ಗೆ 3 ಸಾವಿರ ರೂಪಾಯಿ ದರ ನೀಡಿದ್ದಾರೆ. ಕಳೆದ ವರ್ಷದ ಎರಡನೇ ಕಂತು ಘೋಷನೆ ಮಾಡಬೇಕು. ಮಹಾರಾಷ್ಟ್ರದ ಗಡಿ ಭಾಗದ ಕಾರ್ಖಾನೆಗಳು ಕರ್ನಾಟಕದ ಗಡಿ ತಾಲೂಕಿನ ರೈತರ ಕಬ್ಬಿನ ಮೇಲೆ ಕಾರ್ಖಾನೆಗಳು ನಡೆಯುತ್ತಿದ್ದಾವೆ. ಕಾರ್ಖಾನೆ ಮಾಲಿಕರು ಕಬ್ಬಿನ ದರ ನೀಡುವಾಗ ಯಾವುದೇ ತಾರತಮ್ಯ ಮಾಡಬಾರದು ಎಂದು ಅವರು ಮನವಿ ಮಾಡಿಕೊಂಡರು.
ಈ ವೇಳೆ ಕಿರಣ ಮಿಸಾಳ, ರಮೇಶ ಕುಂಬಾರ, ರಾಮಗೌಡ ಪಾಟೀಲ, ಮಹಮ್ಮದ ಜಮಾದಾರ, ಬಾಳಪ್ಪ ಕೋಳೆಕರ, ಮಲ್ಲಿಕಾರ್ಜುನ ಶೇಗನೆ, ಭೀಮು ಮಿಸಾಳ ಇನ್ನೀತರು ಉಪಸ್ಥಿತ ಇದ್ದರು.
ಈ ಕುರಿತು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾದ ಜ್ಯೋಶಿ ಇವರನ್ನು ಸಂಪರ್ಕಿಸಿದಾಗ ನಾವು ಕಳೆದ ವರ್ಷ ಪ್ರತಿ ಟನ್ಗೆ 3 ಸಾವಿರ ರೂಪಾಯಿ ದರವನ್ನು ನೀಡಿದ್ದೇವೆ. ಜತ್ತ ತಾಲೂಕಿನ ಯಾವುದೇ ಕಾರ್ಖಾನೆಗಳು ಎರಡನೇ ಕಂತು ಹಾಕಿದರೆ, ಅದರ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರ ಮುಂದಿಟ್ಟು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.