ಕಡವಾಡ -ಸುಂಕೇರಿ : ಬಳಕೆ ಮಾಡದ ಹಳೆಯ ಸೇತುವೆ ಕುಸಿತ

ಕಡವಾಡ -ಸುಂಕೇರಿ : ಬಳಕೆ ಮಾಡದ ಹಳೆಯ ಸೇತುವೆ ಕುಸಿತ  Kadawada-Sunkeri: Old unused bridge collapses

ಕಾರವಾರ  09: ಕಾರವಾರದ ಸುಂಕೇರಿ- ಕಡವಾಡ ಗ್ರಾಮಗಳನ್ನು ಬೆಸೆಯುತ್ತಿದ್ದ, ಬಳಕೆ ಮಾಡದೇ ಹಾಗೆ ಬಿಟ್ಟಿದ್ದ ಹಳೆಯ ಸೇತುವೆ ನಿನ್ನೆ ರಾತ್ರಿ ಕುಸಿದಿದೆ. ಕಾಳಿ ನದಿ ಹಿನ್ನೀರಲ್ಲಿ ಈ ಸೇತುವೆ ನಿರ್ಮಾಣ ಐವತ್ತೈದು ವರ್ಷಗಳ ಹಿಂದೆ ಆಗಿತ್ತು. ಆ ಕಾಲದ ಪ್ರಸಿದ್ಧ ಗುತ್ತಿಗೆದಾರ ಆರ್‌.ಎನ್‌.ಶೆಟ್ಟಿ ಈ ಸೇತುವೆಯನ್ನು ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ್ದರು. ಕಡವಾಡ ಕಾರವಾರ ಸುಂಕೇರಿ ಪ್ರದೇಶವನ್ನು ಸಂಪರ್ಕಿಸುತ್ತಿತ್ತು. ಈ ಸೇತುವೆ ಹಿನ್ನೀರಿನಲ್ಲಿ ಇದ್ದ ಕಾರಣ ಗಾಳ ಹಾಕಿ ಮೀನು ಹಿಡಿಯಲು ಸಹ ಈ ಸೇತುವೆ ಆಧಾರವಾಗಿತ್ತು. ಸೇತುವೆ ಶಿಥಿಲಾವಸ್ಥೆ ತಲುಪಿದ್ದ ಕಾರಣ ಹತ್ತು ವರ್ಷಗಳ ಹಿಂದೆ ಈ ಸೇತುವೆಯ ಮೇಲೆ ವಾಹನ ಸಂಚಾರ ನಿರ್ಬಂಧ ಮಾಡಲಾಗಿತ್ತು. ಅಲ್ಲದೆ ಇದರ ಪಕ್ಕದಲ್ಲಿ ಎಂಟು ವರ್ಷಗಳ ಹಿಂದೆ ಹೊಸ ಸೇತುವೆಯನ್ನು ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರ  ನಿರ್ಮಾಣ ಮಾಡಲಾಗಿತ್ತು. ಹೊಸ ಸೇತುವೆ ಎಂಟು ವರ್ಷಗಳ ಹಿಂದೆ   ಉದ್ಘಾಟನೆ ಆಗಿತ್ತು. ನಂತರ ಹಳೆಯ ಸೇತುವೆ ಬಳಕೆ ಸಂಪೂರ್ಣ ನಿಂತಿತ್ತು. ಬಳದೇ ಇದ್ದ ಹಳೆಯ ಸೇತುವೆಯ ಒಂದು ತುದಿಯಲ್ಲಿ ಮೂರು ಸ್ಲ್ಯಾಬ್ ಕುಸಿದಿವೆ. ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಬಳಸದೆ ಬಿಟ್ಟ ಸೇತುವೆಯಾದ ಕಾರಣ ,ಯಾರಿಗೂ ಹಾನಿ ಸಂಭವಿಸಿಲ್ಲ ಎಂದು ತಾಲೂಕಿನ ಅಧಿಕಾರಿಗಳು ತಿಳಿಸಿದ್ದಾರೆ.