ನಾನಾ ಬೇಡಿಕೆ ಈಡೇರಿಕೆಗೆ ರೈತ ಸಂಘ ಒತ್ತಾಯ

ನಾನಾ  ಬೇಡಿಕೆ  ಈಡೇರಿಕೆಗೆ ರೈತ ಸಂಘ ಒತ್ತಾಯ  Farmers' association demands fulfillment of various demands

ಹೂವಿನಹಡಗಲಿ 9 -  ರೈತರ ನಾನಾ ಸಮಸ್ಯೆಗಳನ್ನುಬಗೆಹರಿಸುವಂತೆ, ಕರ್ನಾಟಕ ರಾಜ್ಯ ರೈತ ಸಂಘ ಮಂಗಳವಾರ ಸಂಸದ ತುಕಾರಾಂ, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ  ಅವರಿಗೆ ಮನವಿ ಸಲ್ಲಿಸಿತು. ತಾಲ್ಲೂಕಿನ ಕೊಯಿಲಾರಗಟ್ಟಿ ಕೃಷಿ ಸಂಶೋಧನೆ ಕೇಂದ್ರ, ರಸ ಗೊಬ್ಬರ, ಗದಗ- ್ಷಹರಪನಹಳ್ಳಿ ರೈಲ್ವೆ ಮಾರ್ಗ , ಪೊಲೀಸ್ ತರಬೇತಿ ಕೇಂದ್ರ, ಭೂ ಪರಿಹಾರ ಮತ್ತು ಅಂಚೆ ಕಚೇರಿ ಕಟ್ಟಡ ನಿರ್ಮಾಣ , ರೈತರ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲು ಮನವಿಯನ್ನು ನೀಡಿದರು.   ಇದೇ ವೇಳೆ ಶಾಸಕ ಕೃಷ್ಣನಾಯಕ,  ಗೌರವಾದ್ಯಕ್ಷ ಮಡ್ಡಿ ಪಕ್ಕೀರ​‍್ಪ, ಉಪಾಧ್ಯಕ್ಷ ವಿಠಲ ನಾಯ್ಡ, ವಿ.ಬಿ.ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಶಿವರಾಜ, ದುರುಗಪ್ಪ ಹೆಚ್‌. ಗನ್ನಿಸಾಬ್ ಇದ್ದರು.